ಬೊಳುಬೈಲು: ಶ್ರೀ ಕ್ಷೇತ್ರ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ವತಿಯಿಂದ ಸ್ವಚ್ಛತಾ ಕಾರ್ಯ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಬಿ ಸಿ ಟ್ರಸ್ಟ್ ಸುಳ್ಯ ತಾಲೂಕು ಜಾಲ್ಸೂರು ವಲಯದ ಬೊಳುಬೈಲು ಒಕ್ಕೂಟ ಮತ್ತು ನವಚೇತನ ಯುವಕ ಮಂಡಲ ಬೊಳುಬೈಲು ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿ ತಿಂಗಳು ಒಕ್ಕೂಟ ಸಭೆ ನಡೆಯುತ್ತಿರುವ ನವ ಚೇತನ ಯುವಕ ಮಂಡಲದ ವಠಾರ ಸ್ವಚ್ಛತಾ ಕಾರ್ಯಕ್ರಮವು ಆ.11ರಂದು ನಡೆಯಿತು.

ಸ್ವಚ್ಛತಾ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬೊಳುಬೈಲು ಒಕ್ಕೂಟದ ಸದಸ್ಯರು ಹಾಗೂ ನವಚೇತನ ಯುವಕ ಮಂಡಲ ಸದಸ್ಯರು ಕಳೆ ಕೊಚ್ಚುವ ಯಂತ್ರ ನೀಡಿ ಸಹಕರಿಸಿದರು.

ಈ ಸಂದರ್ಭದಲ್ಲಿ ಬೊಳುಬೈಲು ಒಕ್ಕೂಟದ ಅಧ್ಯಕ್ಷ ಪದ್ಮನಾಭ ನೆಕ್ರಾಜೆ, ನವಚೇತನ ಯುವಕ ಮಂಡಲ ಅಧ್ಯಕ್ಷ ಶಶಿಪ್ರಸಾದ್ ಕಾಟೂರು, ಜಾಲ್ಸೂರು ವಲಯದ ಮೇಲ್ವಿಚಾರಕ ತೀರ್ಥರಾಮ, ಬೊಳುಬೈಲು ಸೇವಾಪ್ರತಿನಿಧಿ ಶ್ರೀಮತಿ ಸಂಧ್ಯಾ, ಒಕ್ಕೂಟದ ಸದಸ್ಯರುಗಳು, ನವಚೇತನ ಯುವಕ ಮಂಡಲದ ಸದಸ್ಯರುಗಳು ಭಾಗವಹಿಸಿದ್ದರು.