ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಮಂಗಳೂರು ವತಿಯಿಂದ ಆಟಿ ಆಷಾಡ ಸಂತೋಷ ಕೂಟ

0

ಕೃಷ್ಣಪ್ಪ ಗೌಡ ಪಡ್ಡ೦ಬೈಲ್ ರವರಿಗೆ “ತಾರಸಿ ಕೃಷಿ ತೋಟ ತಜ್ಞ” ಬಿರುದು ಪ್ರದಾನ

ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಮಂಗಳೂರು ಇವರು ಆಯೋಜಿಸಿದ ಆಟಿ ಆಷಾಡ ಸಂತೋಷ ಕೂಟ ಕಾಯ೯ಕ್ರಮವು
ಮಂಗಳೂರು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಇತ್ತೀಚೆಗೆ ನಡೆಯಿತು.

ಸಮಾಜ ಬಾಂಧವರು ಸಹ ಬೋಜನದೊಂದಿಗೆ ಆಟಿ ತಿಂಗಳ ಸಂಪ್ರಾದಾಯಿಕ ಶೈಲಿಯ ಖಾದ್ಯಗಳನ್ನು ಸವಿದು ಸಂತಸ ಪಟ್ಟರು. ಈ ಕಾಯ೯ಕ್ರಮದಲ್ಲಿ ಮಂಗಳೂರಿನ ಹೆಸರಾಂತ ತಾರಸಿ
ಕೃಷಿಕ, ಶಿಕ್ಷಣ ಇಲಾಖೆಯ ನಿವೃತ್ತ ಉದ್ಯೋಗಿಯು ಆಗಿರುವ ಡಾ.ಕೃಷ್ಣಪ್ಪ ಗೌಡ ಪಡ್ಡ೦ಬೈಲ್ ಇವರು ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ “ತಾರಸಿ ತೋಟ ಕೃಷಿ ತಜ್ಞ” ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು
ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡ.ಕೆ ಇವರು ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿದ್ಯಾರಶ್ಮಿ ಪದವಿಪೂವ೯ ಕಾಲೇಜಿನ ಪ್ರಾಂಶುಪಾಲ ಸೀತಾರಾಮ
ಕೇವಳ ಹಿಂದಿನ ಕಾಲದ ಆಟಿಯ ಆಚರಣೆಯ ಬಗ್ಗೆ ಉಪನ್ಯಾಸ ನೀಡಿದರು. ಅತಿಥಿಗಳಾಗಿ ಮಂಗಳೂರು ಅಪರಾಧ ಹಾಗೂ ಸಂಚಾರ ವಿಭಾಗ ಪೋಲಿಸ್ ಉಪ ಆಯುಕ್ತ ದಿನೇಶ್ ಕುಮಾರ್ ಬಿ.ಪಿ, ವೇದಂ ಆರೋಗ್ಯ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಮುಖ್ಯ ಆಯುವೇ೯ದ ತಜ್ಞ ಡಾ. ಸಚಿನ್ ನಡ್ಕ ಎಂ.ಡಿ. ಸೇರಿದಂತೆ ಗೌಡರ ಸೇನಾ ಸ೦ಘದ ಪದಾಧಿಕಾರಿಗಳು, ನಿರ್ದೇಶಕರುಗಳು, ಮಹಿಳಾ ಘಟಕ, ಯುವ ಘಟಕ, ಸೇರಿದಂತೆ
ವಿವಿಧ ಘಟಕ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.