ಕಡೆಪಾಲ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಕಡೆಪಾಲ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶ್ರೀ ಮತಿ ಬಿಂದು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕಟ್ಟಡ ಕಾರ್ಮಿಕ ಸಂಘದ ಗೌರವಾಧ್ಯಕ್ಷರಾದ ಶ್ರೀಧರ ಕಡೆಪಾಲ, ತೇಜೇಶ್ ಬಿ ವೈ, ಈಶ್ವರ ಕೆ ಸಿ, ಯುವರಾಜ ಕಡೆಪಾಲ, ಶ್ರೀಮತಿ ಸುಮಾ, ಶ್ರೀಮತಿ ಸುನೀತಾ, ಶ್ರೀಮತಿ ಹೊನ್ನಮ್ಮ ಮತ್ತು ಅಂಗನವಾಡಿ ಕೇಂದ್ರದ ಶಿಕ್ಷಕಿ ಶ್ರೀಮತಿ ಪುಷ್ಪಾವತಿ, ಸಹಾಯಕಿ ಶ್ರೀಮತಿ ಹರಿನಾಕ್ಷಿ ಮತ್ತು ಪುಟಾಣಿ ಮಕ್ಕಳು ಆಗಮಿಸಿದ್ದರು. ಕಾರ್ಯಕ್ರಮವನ್ನು ಅಂಗನವಾಡಿಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ನಿರೂಪಿಸಿ, ತೇಜೇಶ್ ಬಿ ವೈ ವಂದಿಸಿದರು.