ಉಬರಡ್ಕ ಮಿತ್ತೂರು: ಶ್ರೀ ಗಣೇಶೋತ್ಸವ ಸಮಿತಿ ರಚನೆ

0

ಉಬರಡ್ಕ ಮಿತ್ತೂರಿನ ಸಾರ್ವಜನಿಕ ಶ್ರೀ ದೇವತಾರಧನ ಸಮಿತಿ ವತಿಯಿಂದ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ ಆ.8ರಂದು ಶ್ರೀ ದೇವತಾರಾಧನ ಸಮಿತಿ ಅಧ್ಯಕ್ಷರಾದ ಕೆ. ಶಶಿಧರ್ ನಾಯರ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ರಾಘವ ರಾವ್ ಬಿ., ಪ್ರಧಾನ ಕಾರ್ಯದರ್ಶಿಯಾಗಿ ನಿಕೇಶ್ ಉಬರಡ್ಕ, ಖಜಾಂಜಿಯಾಗಿ ಪದ್ಮನಾಭ ಹೆಚ್.ಆರ್., ಸಂಚಾಲಕರಾಗಿ ಶ್ಯಾಮ್ ಪಾನತ್ತಿಲ, ಉಪಾಧ್ಯಕ್ಷರುಗಳಾಗಿ ಗಿರಿಧರ ದಾಸ್, ಮಾನ ಪಾಟಾಳಿ, ನಾರಾಯಣ ಕಾಡುತೋಟ, ಜತೆ ಕಾರ್ಯದರ್ಶಿಯಾಗಿ ಹವಿನ್ ಉರುಂಡೆ ಆಯ್ಕೆಯಾದರು.

ಸಂಚಾಲಕರಾದ ಶ್ಯಾಮ್ ಪಾನತ್ತಿಲ ಸ್ವಾಗತಿಸಿ, ರಾಘವ ಬಿ.ರಾವ್ ವಂದಿಸಿದರು. ದೇವತಾರಾಧನ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಕಕ್ಕೆಬೆಟ್ಟು ಉಪಸ್ಥಿತರಿದ್ದರು.