ಕಲ್ಕುಡ ದೈವಸ್ಥಾನದಲ್ಲಿ ಸಂಕ್ರಮಣ ಪ್ರಯುಕ್ತ ವಿಶೇಷಪೂಜೆ-ಸಾಮೂಹಿಕ ಪ್ರಾರ್ಥನೆ

0

ಸುಳ್ಯದ ಕಾರಣಿಕ ಕ್ಷೇತ್ರ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಸಿಂಹ ಸಂಕ್ರಮಣ ಪ್ರಯುಕ್ತ ವಿಶೇಷ ಪೂಜೆ ಹಾಗೂ ಸಾಮೂಹಿಕ ಪ್ರಾರ್ಥನೆಯು ಇಂದು ಬೆಳಗ್ಗೆ ನೆರವೇರಿತು.
ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಸಂಕ್ರಮಣ ಒಂದೇ ದಿನದಂದು ಆಚರಿಸಲ್ಪಡುತ್ತಿರುವು ದರಿಂದ ಭಕ್ತಾದಿಗಳ ಸಂಖ್ಯೆ ಜಾಸ್ತಿ ಕಂಡು ಬಂದಿತು. ದೈವಸ್ಥಾನದ ಆಡಳಿತ ಧರ್ಮದರ್ಶಿ ಪಿ.ಕೆ.ಉಮೇಶ್ ರವರು ಹರಕೆ ಸಮರ್ಪಣೆಯ ಪ್ರಾರ್ಥನೆ ನೆರವೇರಿಸಿದರು. ಧರ್ಮದರ್ಶಿ ಮಂಡಳಿಯ ಸದಸ್ಯರು, ಪೂಜಾರಿಗಳು ಉಪಸ್ಥಿತರಿದ್ದರು.