ಸುಳ್ಯ ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಸದಸ್ಯರುಗಳ ನೇಮಕ

0

ರಾಜ್ಯ ಸರಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಕರ್ನಾಟಕ ಸರಕಾರದ ಆದೇಶದಂತೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸ್ಸಿನ ಮೇರೆಗೆ ಸುಳ್ಯ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರನ್ನು ನೇಮಕ ಮಾಡಿದ್ದಾರೆ. ಶಾಹುಲ್ ಹಮೀದ್ ಸುಳ್ಯ, ರವಿ ಗುಂಡಡ್ಕ, ಭವಾನಿಶಂಕರ ಕಲ್ಮಡ್ಕ, ವಿಜೇಶ್ ಹಿರಿಯಡ್ಕ, ಶ್ರೀಮತಿ ಕಾಂತಿ ಬಿ.ಎಸ್.ಕಲ್ಲುಗುಂಡಿ, ಶ್ರೀಮತಿ ಭವಾನಿ ಬೊಮ್ಮೆಟ್ಟಿ, ಸೋಮಶೇಖರ ಕೇವಳ, ರಾಜು ನೆಲ್ಲಿಕುಮೇರಿ, ಎ.ಬಿ.ಅಬ್ಬಾಸ್ ಅಡ್ಕಮನೆ, ಈಶ್ವರ ಆಳ್ವ ಬೇರ್ಯ ಕೊಡಿಯಾಲ, ಲತೀಫ್ ಅಡ್ಕಾರ್, ಮಣಿಕಂಠ ಕೊಳಗೆ, ಶೇಖರ ಮಣಿಯಾಣಿ ಕಣೆಮರಡ್ಕ, ಧನುಷ್ ಕುಕ್ಕೆಟ್ಟಿ, ಶಿಲ್ಪ ಇಬ್ರಾಹಿಂ ಸುಳ್ಯ, ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ. ಸುಳ್ಯರವರು ನೇಮಕಗೊಂಡಿದ್ದಾರೆ.