ನಾಲ್ಕೂರು : ಶೌರ್ಯ ಸ್ವಯಂಸೇವಕರಿಗೆ ರಕ್ಷಣಾ ಪರಿಕರಗಳ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಡ್ಯಾಮ್‌ನಲ್ಲಿ ತುಂಬಿರುವ ಮರ ತೆರವು ಅಲ್ಲದೇ ಇತರ ಸೇವಾ ಕಾರ್ಯವನ್ನು ಗುರುತಿಸಿ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರಾದ ವಿಜಯಕುಮಾರ್ ಚಾರ್ಮತರವರು ಘಟಕದ ಸದಸ್ಯರ ಅನೂಕೂಲತೆಗಾಗಿ ಅಗತ್ಯವಾದ ಜಾಕೆಟ್, ಹೆಲ್ಮೆಟ್ ಹಾಗೂ ರೋಪ್ ಖರೀದಿಸಲು ಸಹಕಾರ ನೀಡಿದರು. ಅದನ್ನು ೭೮ನೇ ಸ್ವಾತಂತ್ರ್ಯ ದಿನದಂದು ಘಟಕದ ಸ್ವಯಂಸೇವಕರಿಗೆ ಹಸ್ತಾಂತರ ಮಾಡಿ ಘಟಕ ಸ್ವಯಂಸೇವಕರ ಸೇವೆಯನ್ನು ಸ್ಮರಿಸಿ ವಿಶೇಷ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ನಾಲ್ಕೂರು ಒಕ್ಕೂಟದ ಸ್ಥಾಪಕದ್ಯಕ್ಷರಾದ ಮೋಹನ್ ಎರ್ದಡ್ಕ , ಹಿರಿಯ ಗುರುಗಳಾದ ದುಗ್ಗಪ್ಪ ಮಾಸ್ತರ್ ಕುಳ್ಳಂಪ್ಪಾಡಿ, ಶಾಲಾ ಮುಖ್ಯಗುರುಗಳಾದ ಜಯಂತಿ, ಸಹಶಿಕ್ಷಕಿ ಲತಾಶ್ರೀ ಉಪಸ್ಥಿತರಿದ್ದರು.