ಉಬರಡ್ಕ: ಸಾರ್ವಜನಿಕ ಗಣೇಶೋತ್ಸವ ಆಮಂತ್ರಣ ಬಿಡುಗಡೆ

0

ಉಬರಡ್ಕ ಮಿತ್ತೂರಿನ ಶ್ರೀ ನರಸಿಂಹ ಶಾಸ್ತಾವು ದೇವಾಲಯ, ಸಾರ್ವಜನಿಕ‌ ಶ್ರೀ ದೇವತಾರಾಧನ ಸಮಿತಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ ನಡೆಯುವ 14 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಆ.16 ರಂದು ಶ್ರೀ ನರಸಿಂಹ ಶಾಸ್ತಾವು ದೇವಾಲದಲ್ಲಿ ನಡೆಯಿತು.


ದೇವಾಲಯದ ಅರ್ಚಕ ಮಧ್ವರಾಜ್ ಭಟ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.


ಈ ಸಂದರ್ಭದಲ್ಲಿ ದೇವತಾರಾಧನ ಸಮಿತಿ ಅಧ್ಯಕ್ಷ ಕೆ.ಶಶಿಧರ ನಾಯರ್, ಪ್ರಧಾನ ಕಾರ್ಯದರ್ಶಿ ಜಗದೀಶ ಕಕ್ಕೆಬೆಟ್ಟು, ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ರಾಘವ ರಾವ್, ಪ್ರಧಾನ ಕಾರ್ಯದರ್ಶಿ ನಿಕೇಶ್ ಉಬರಡ್ಕ, ಜತೆ ಕಾರ್ಯದರ್ಶಿ ಹವಿನ್ ಉರುಂಡೆ, ಕೋಶಾಧಿಕಾರಿ ಪದ್ಮನಾಭ ಹೆಚ್.ಆರ್., ಉಪಾಧ್ಯಕ್ಷ ಮಾನ ಪಾಟಾಳಿ, ಗಿರಿಧರ ದಾಸ್, ನಾರಾಯಣ ಕಾಡುತೋಟ, ಕ್ಯಾಪ್ಟನ್ ಜಯಕರ ಮಡ್ತಿಲ, ದಿವಾಕರ ಶೆಟ್ಟಿಹಿತ್ಲು, ಜಗನ್ನಾಥ ಶೆಟ್ಟಿ, ಶಿವಾನಂದ ಶೆಟ್ಟಿ,ರಾಮಕೃಷ್ಣ ನಾಯ್ಕ್, ಶ್ರಿಮತಿ ಶೈಲಾ ದಿವಾಕರ್, ಶ್ರೀಮತಿ ರಾಜೇಶ್ವರಿ ಕಾಡುತೋಟ, ಶ್ರೀಮತಿ ವನಿತಾ ಮೀನಗದ್ದೆ, ಹಾಗೂ ನಂದಿನಿ ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು.