ಹಳೆಗೇಟು: ಸಾಂಸ್ಕೃತಿಕ ಸಂಘದ 41ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಸುಳ್ಯ ಹಳೆಗೇಟು ಸಾಂಸ್ಕೃತಿಕ ಸಂಘ (ರಿ.) ಇದರ 41ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಆ 16 ರಂದು ಹಳೆಗೇಟಿನ ವಸಂತಕಟ್ಟೆ ಯಲ್ಲಿ ನಡೆಯಿತು.

ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ಭಕ್ತಾದಿಗಳಿಗೆ ಮೂರು ದಿನದ ಅದ್ದೂರಿಯ ಗಣೇಶೋತ್ಸವದ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಿವಾನಾಥ ರಾವ್, ಜೊತೆ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಖಜಾಂಜಿ ಚಿತ್ತರಂಜನ್, ಪೂರ್ವಾಧ್ಯಕ್ಷರಾದ ಜ್ಞಾನೇಶ್ವರ ಶೇಟ್, ದಿವಾಕರ್ ಸೇರ್ಕಜೆ, ಗಣೇಶ್ ಕೊಯಿಂಗೋಡಿ, ಶಿವಾಜಿ ಯುವ ವೃಂದದ ಅಧ್ಯಕ್ಷ ಸಚಿನ್ ರಾವ್, ಸದಸ್ಯರುಗಳಾದ ಯತಿನ್ ರಾವ್, ರಾಮಕೃಷ್ಣ ಆಲಂಕಲ್ಯ, ವಿಜಯ್ ಕುಮಾರ್, ಧನಂಜಯ ಪಂಡಿತ್, ಗೌತಮ್ ಭಟ್, ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.