ಅರಂತೋಡಿನಲ್ಲಿ ಅಖಂಡ ಭಾರತದ ಸಂಕಲ್ಪ ದಿನ

0

ವಿಶ್ವ ಹಿಂದೂ ಪರಿಷದ್ ಭಜರಂಗದಳ ಮಾತೃ ಶಕ್ತಿ, ದುರ್ಗಾ ವಾಹಿನಿ ಸುಳ್ಯ ಪ್ರಖಂಡ ,ಅರಂತೋಡು
ಹನುಮಾನ್ ಶಾಖೆಯ ವತಿಯಿಂದ
ಅಖಂಡ ಭಾರತ ಸಂಕಲ್ಪ ಯಾತ್ರೆಯು ಆ.13 ರಂದು ನಡೆಯಿತು.

ದುರ್ಗಾ ಮಾತಾ ಭಜನಾ ಮಂದಿರದ ಅಧ್ಯಕ್ಷ
ಕೆ. ಆರ್ ಪದ್ಮನಾಭ ಮೆರವಣಿಗೆಗೆ ಚಾಲನೆ ನೀಡಿದರು.
ಕೊಡಂಕೇರಿ ಕೊರಗಜ್ಜ ದೈವಸ್ಥಾನದ ದ್ವಾರದ ಬಳಯಿಂದ ತೋಡಿಕಾನ ರಸ್ತೆಯ ದ್ವಾರದ ತನಕ ಮೆರವಣಿಗೆ ಸಾಗಿ ಬಂತು.
ನಿವೃತ್ತ ಯೋಧ ಮಾಧವ ಭಾಜಿನಡ್ಕ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ರಾಜೇಶ್ ರೈ ಮೇನಾಲ ದಿಕ್ಸೂಚಿ ಭಾಷಣ ಮಾಡಿದರು.

ವೇದಿಕೆಯಲ್ಲಿ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ್ ಪೈಕ, ಮಾತೃ ಶಕ್ತಿ ಪ್ರಮುಖ್ ರೀನಾ ಚಂದ್ರಶೇಖರ ಚೋಡಿಪಣೆ, ಜಿಲ್ಲಾ ಸಪ್ತಾಹಿಕ್ ಮಿಲನ್ ರೂಪೇಶ್ ಪೂಜಾರಿಮನೆ, ಹನುಮಾನ್ ಶಾಖೆ ಆರಂತೋಡು ಅಧ್ಯಕ್ಷ ವಿನೋದ್ ಕುಮಾರ್ ಉಳುವಾರು ಉಪಸ್ಥಿತರಿದ್ದರು.

ವೈಯಕ್ತಿಕ ಗೀತೆಯನ್ನು ದೀಪ್ತಿ ಪೈಕ ಹಾಡಿದರು. ಪುಷ್ಪ ಮೇದಪ್ಪ ವಂದೇ ಮಾತರಂ ಹಾಡಿದರು. ಹಿಂದೂ ಮುಖಂಡರು ಹಾಗೂ ‌ಕಾರ್ಯಕರ್ತರು ಭಾಗವಹಿಸಿದರು.