ವಿಸ್ತೃತವಾಗಿ ನವೀಕರಣಗೊಂಡ ಪಾದಂ ಪಾದರಕ್ಷೆ ಮಳಿಗೆಯ ಶುಭಾರಂಭ

0

ಸುಳ್ಯದ ಸಿ.ಎ.ಬ್ಯಾಂಕ್ ಕಾಂಪ್ಲೆಕ್ಸ್ ನಲ್ಲಿ ಕಳೆದ 4 ವರುಷಗಳಿಂದ ವ್ಯವಹರಿಸುತ್ತಿರುವ ಪಾದಂ ಪಾದರಕ್ಷೆ ಮಳಿಗೆಯು ಇದೀಗ ಗ್ರಾಹಕರ ಹೆಚ್ಚಿನ ಅನೂಕೂಲತೆಗೋಸ್ಕರ ವಿಸ್ತೃತವಾಗಿ ನವೀಕರಣಗೊಂಡು
ಆ.19 ರಂದು ಶುಭಾರಂಭಗೊಂಡಿತು.

ಹಿರಿಯ ಉದ್ಯಮಿ, ವೆಂಕಟರಮಣ ದೇವ ಮಂದಿರದ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯ, ವೆಂಕಟರಮಣ ದೇವ ಮಂದಿರದ ಅಧ್ಯಕ್ಷ ಪ್ರಕಾಶ್ ಶೆಣೈ, ಶ್ರೀ ಕೃಷ್ಣ ಕನ್ಸೆಲ್ಟೆನ್ಸಿ ಸಿವಿಲ್ ಇಂಜಿನಿಯರ್ ಕೃಷ್ಣ ರಾವ್ ನಾವೂರು,
ಹೆಚ್.ಇ.ಎಫ್ ಸ್ಥಾಪಕಾಧ್ಯಕ್ಷ ಕೇಶವ ನಾಯಕ್ ರವರು ದೀಪ ಪ್ರಜ್ವಲಿಸಿ ಮಳಿಗೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಿ.ಎ.ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು, ಸದಸ್ಯರು, ಸಿಬ್ಬಂದಿ ವರ್ಗದವರು, ವೆಂಕಟರಮಣ ದೇವ ಮಂದಿರದ ಆಡಳಿತ ಮಂಡಳಿಯ ಸದಸ್ಯರು, ಸುಳ್ಯ ಹೆಚ್.ಇ.ಎಫ್ ಸದಸ್ಯರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.


ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ಸಂಸ್ಥೆಯ ಪಾಲುದಾರ ಚಿದಾನಂದ ವಿದ್ಯಾನಗರ ವಂದಿಸಿದರು. ಮಳಿಗೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲರಿಗೂ ರಕ್ಷೆ ಕಟ್ಟುವ ಮೂಲಕ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.