ಸುಳ್ಯ ಮುಖ್ಯ ಪೇಟೆಯಲ್ಲಿಕುಡುಕರ ದಾಂಧಲೆ –

0

ಜಮಾಯಿಸಿದ ಜನರು, ಕೆಲ ಕಾಲ ಟ್ರಾಫಿಕ್ ಜಾಮ್

ಸುಳ್ಯದ ಮುಖ್ಯ ರಸ್ತೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಸಿ.ಎ.ಬ್ಯಾಂಕ್ ಕಮರ್ಷಿಯಲ್ ‌ಕಾಂಪ್ಲೆಕ್ಸ್ ಇದರ ಪ್ರವೇಶ ದ್ವಾರದಲ್ಲಿ ಕುಡುಕರು ದಾಂಧಲೆ ನಡೆಸಿದ್ದು ಕೆಲ ಕಾಲ ಟ್ರಾಫಿಕ್ ಜಾಮ್ ಆದ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಕುಡುಕರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆಸಿದರು.
ಈ ವೇಳೆಗೆ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಅಡಚಣೆ ಯಾಗಿ ಟ್ರಾಫಿಕ್ ಜಾಮ್ ಆಯಿತು.
ಬಳಿಕ ಸ್ಥಳಕ್ಕೆ ಬಂದ ಪೋಲೀಸರು ಗಲಾಟೆ ನಡೆಸುತ್ತಿದ್ದವರನ್ನು ಠಾಣೆಗೆ ಕರೆದೊಯ್ದು ಟ್ರಾಫಿಕ್ ಕ್ಲೀಯರ್ ಮಾಡಿದರು.
ಈ ಪರಿಸರದಲ್ಲಿ
ನಿತ್ಯ ಕುಡುಕರ ಹಾವಳಿಯಿಂದಾಗಿ ಪಾದಚಾರಿಗಳಿಗೆ ಮತ್ತು ವ್ಯಾಪಾರಸ್ಥರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ವ್ಯಾಪಾರಸ್ಥರು ದೂರಿಕೊಂಡರು.