ಅಮರಮುಡ್ನೂರು ಪಂಚಾಯತ್ ನಲ್ಲಿ ಕಾರ್ಯದರ್ಶಿ ವಸಂತ ಸಂಕೇಶ ರಿಗೆ ಬೀಳ್ಕೊಡುಗೆ ಸಮಾರಂಭ

0

ಅಮರಮುಡ್ನೂರು ಗ್ರಾಮ ಪಂಚಾಯತಿನಲ್ಲಿ ಬಿಲ್ ಕಲೆಕ್ಟರ್ ಆಗಿ ಸುಮಾರು 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಇದೀಗ ಕಾರ್ಯದರ್ಶಿ ಯಾಗಿ ನೆಲ್ಲೂರು ಕೆಮ್ರಾಜೆ ಪಂಚಾಯತ್ ಗೆ ಭಡ್ತಿ ಹೊಂದಿರುವ ವಸಂತ ಸಂಕೇಶ ರವರನ್ನುಆ.30 ರಂದುಬೀಳ್ಕೊಡಲಾಯಿತು.

ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಾನಕಿ ಕಂದಡ್ಕ ರವರ ಅಧ್ಯಕ್ಷತೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ವಸಂತ ದಂಪತಿಯವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಭುವನೇಶ್ವರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಪತ್ತುಕುಂಜ,
ಪಂ.ಸದಸ್ಯರಾದ ಅಶೋಕ್ ಚೂಂತಾರು ವೆಂಕಟರಮಣ ಇಟ್ಟಿಗುಂಡಿ, ಕೃಷ್ಣ ಪ್ರಸಾದ್ ಮಾಡಬಾಕಿಲು, ಜಯಪ್ರಕಾಶ್ ದೊಡ್ಹಿಹಿತ್ಲು, ರಾಧಾಕೃಷ್ಣ ಕೊರತ್ಯಡ್ಕ, ಜನಾರ್ದನ , ಶ್ರೀಮತಿ ಪದ್ಮಪ್ರಿಯ, ಶ್ರೀಮತಿ ಭುವನೇಶ್ವರಿ, ಶ್ರೀಮತಿ ತೇಜಾವತಿ, ಶ್ರೀಮತಿ ದಿವ್ಯಾ, ದಿವಾಕರ ಪೈಲಾರು, ಶ್ರೀಮತಿ
ಶಶಿಕಲಾ ಕೇನಡ್ಕ,ಶ್ರೀಮತಿ ಮೀನಾಕ್ಷಿ, ಶ್ರೀಮತಿ ಸೀತಾ ಹೆಚ್ ಉಪಸ್ಥಿತರಿದ್ದರು.


ಪಿ.ಡಿ.ಒ ದಯಾನಂದ ಪತ್ತುಕುಂಜ ಅಭಿನಂದನಾ ಮಾತುಗಳನ್ನಾಡಿದರು.
ಪಂಚಾಯತ್ ಸದಸ್ಯರು ವಸಂತ ರವರ ಕರ್ತವ್ಯ ನಿಷ್ಠೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು

ಪಂ.ಸಿಬ್ಬಂದಿ ಶ್ರೀಮತಿ ಸುಕುಮಾರಿ ಸ್ವಾಗತಿಸಿದರು. ಶ್ರೀಮತಿ ಜಯಲಕ್ಷ್ಮಿ ಅಭಿನಂದನಾ ಪತ್ರ ವಾಚಿಸಿದರು. ಸಿಬ್ಬಂದಿ ಯಶವಂತ ವಂದಿಸಿದರು.
ಶಶಿಧರ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.