ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಶ್ರೀ ಗಣೇಶೋತ್ಸವ ,ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ

0

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯು ಆ.30 ರಂದು ನಡೆಯಿತು.
ಪೊಲೀಸ್ ಠಾಣಾ ಉಪನಿರೀಕ್ಷಕ ಸಂತೋಷ್ ಬಿ.ಪಿ.ಯವರು ಮಾತನಾಡಿ ಮುಂದೆ ಬರುವ ಗಣೇಶೋತ್ಸವ ಹಬ್ಬ,ಈದ್ ಮಿಲಾದ್ ಹಬ್ಬವನ್ನು ಯಾವುದೇ ಸಮಸ್ಯೆಗಳಿಲ್ಲದೆ ಆಚರಿಸುವ ಬಗ್ಗೆ ಮಾಹಿತಿ ನೀಡಿದರು.


ಮೆರವಣಿಗೆ ಸಂದರ್ಭ ಮುಂಜಾಗೃತ ಕ್ರಮ ಕೈಗೊಳ್ಳುವುದು.ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಮೆರವಣಿಗೆ ನಡೆಸುವುದು.ಸಿ.ಸಿ.ಕೆಮರಾ ಅಳವಡಿಸುವುದು ಹಾಗೂ ಇಲಾಖಾ ನಿಯಮಗಳನ್ನು ಪಾಲಿಸಿಕೊಂಡು ಆಚರಿಸುವಂತೆ ತಿಳಿಸಿದರು.
ಈದ್ ಮಿಲಾದ್ ಹಬ್ಬವನ್ನು ಕೂಡ ಶಾಂತಿ ,ಸೌಹಾರ್ದತೆಯಿಂದ ಆಚರಿಸುವಂತೆ ಅವರು ಹೇಳಿದರು.


ತನಿಖಾ ಎಸ್.ಐ.ತಿಮ್ಮಪ್ಪರವರು ಉಪಸ್ಥಿತರಿದ್ದು ಹಬ್ಬಗಳನ್ನು ಶಾಂತಿ,ಸೌಹಾರ್ದತೆಯಿಂದ ನಿಯಮಗಳನ್ನು ಪಾಲಿಸಿಕೊಂಡು ಆಚರಿಸುವಂತೆ ಕರೆನೀಡಿದರು.
ಬ್ಯಾನರ್ ,ಬಂಟಿಂಗ್ಸ್ ಗಳನ್ನು ಹಬ್ಬ ಮುಗಿದ ಮರುದಿನವೇ ತೆರವುಗೊಳಿಸುವಂತೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಧಾರ್ಮಿಕ ಮುಖಂಡರು,ಸಾರ್ವಜನಿಕರು ಉಪಸ್ಥಿತರಿದ್ದರು.