ಆಲೆಟ್ಟಿ ಮೊಸರು ‌ಕುಡಿಕೆ ಉತ್ಸವದ ಶೋಭಾಯಾತ್ರೆ ಉದ್ಘಾಟನೆ

0

ಅಕ್ಷಯ್ ಕೆ.ಸಿ ಯರಿಂದ ಮಡಕೆ ಒಡೆಯುವ ಮೂಲಕ ಶೋಭಾಯಾತ್ರೆ ಗೆ ಚಾಲನೆ

ವೀರ ಯುವಕರ ಅಟ್ಟಿ ಮಡಕೆ ಒಡೆಯುವ ಸಾಹಸಮಯ ಪ್ರದರ್ಶನ

ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ, ಮೊಸರು ಕುಡಿಕೆ ಉತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ 2 ನೇ ವರ್ಷದ ಆಲೆಟ್ಟಿ ಮೊಸರು ಕುಡಿಕೆ ಉತ್ಸವವು ಸೆ.1 ರಂದು ನಡೆಯಿತು.

ಅಪರಾಹ್ನ ನಾರ್ಕೋಡು ಸದಾಶಿವ ಕ್ಷೇತ್ರದ ಮಹಾದ್ವಾರ ಬಳಿ ಮೊಸರು ಕುಡಿಕೆ ಉತ್ಸವದ ಹಿಂದೂ ಯುವಕರ ಅಟ್ಟಿ ಮಡಕೆ ಒಡೆಯುವ ಸಾಹಸಮಯ ಶೋಭಾಯಾತ್ರೆಯನ್ನು ತಾ.ಪಂ.ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ತೆಂಗಿನಕಾಯಿ ಇಡೆದು ಉದ್ಘಾಟಿಸಿದರು.


ಮುಖ್ಯ ಅಭ್ಯಾಗತರಾದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಮೊಸರು ಕುಡಿಕೆಯ ಮಡಿಕೆ ಒಡೆಯುವ ಮೂಲಕ ಶುಭ ಹಾರೈಸಿದರು. ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ರವರು ಶೋಭಾಯಾತ್ರೆ ಗೆ ಧ್ವಜ ಹಸ್ತಾಂತರ ಮಾಡಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ತೀರ್ಥಕುಮಾರ್ ವಾಲ್ತಾಜೆ, ಉತ್ಸವ ಸಮಿತಿ ಅಧ್ಯಕ್ಷ ಉದಯ ಕುಡೆಕಲ್ಲು, ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯ.ಸ.ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಗೌರವಾಧ್ಯಕ್ಷ ಲತೀಶ್ ಗುಂಡ್ಯ, ನಿತಿನ್ ಗುಂಡ್ಯ, ಸುನಿಲ್ ಗುಂಡ್ಯ,
ಕಾರ್ಯದರ್ಶಿ ಸುರೇಶ್ ಆಲೆಟ್ಟಿ, ಕೋಶಾಧಿಕಾರಿ ಶ್ರೀನಾಥ್ ಆಲೆಟ್ಟಿ, ಅಚ್ಚುತ ಮಣಿಯಾಣಿ ಆಲೆಟ್ಟಿ, ಸುಧಾಕರ ಆಲೆಟ್ಟಿ, ನಾರಾಯಣ ರೈ ಆಲೆಟ್ಟಿ, ರಜತ್ ಅಡ್ಕಾರ್, ಸತೀಶ್ ಕೆ.ಜಿ, ಮಮತಾಮುಕುಂದ ನಾರ್ಕೋಡು, ರಾಮಚಂದ್ರ ಆಲೆಟ್ಟಿ,
ಕಾರ್ಯದರ್ಶಿ ವಿಷ್ಣು ಪ್ರಸಾದ್ ಗುಂಡ್ಯ, ನಾಗರಾಜ್ ಮೂಲೆಬಡ್ಡಡ್ಕ ಹಾಗೂ ಸಮಿತಿ ಮತ್ತು ಕ್ಲಬ್ ಪದಾಧಿಕಾರಿಗಳು ,ಸದಸ್ಯರು ಉಪಸ್ಥಿತರಿದ್ದರು.
ಬಳಿಕ ಯುವಕರ ಅಟ್ಟಿ ಮಡಕೆ ಒಡೆಯುವ ಸಾಹಸಮಯ ಪ್ರದರ್ಶನ ಸುಮಾರು 16 ಕಡೆಗಳಲ್ಲಿ ನಡೆಯಿತು.