ಬೀದಿಗುಡ್ಡೆ: ಶ್ರೀ ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ, ಮೊಸರು ಕುಡಿಕೆ

0

ಬೀದಿಗುಡ್ಡೆಯ
ಶ್ರೀ ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಆ. 1ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ 29 ನೇ ವರ್ಷದ ಮೊಸರು ಕುಡಿಕೆ ಮತ್ತು ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು.
ಉದ್ಘಾಟನಾ ಸಮಾರಂಭ ಸಭಾಧ್ಯಕ್ಷತೆಯನ್ನು ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಮಹೇಶ್ ಸೂಂತಾರ್ ವಹಿಸಿದ್ದರು.


ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಪ ಶ್ರೀ ತ್ರಿಶೂಲಿನಿ ದೇವಸ್ಥಾನದ ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ತ್ರಿಶೂಲಿನಿ ದೇವಸ್ಥಾನದ ಧಾರ್ಮಿಕ ಉತ್ಸವ ಸಮಿತಿಯ ಪೂರ್ವಧ್ಯಕ್ಷ ಸದಾನಂದ ರೈ ಅರ್ಗುಡಿ, ಬಳ್ಪ ಗ್ರಾ. ಪಂ. ಸದಸ್ಯೆ ಸುನಿತ ಸಂಪ್ಯಾಡಿ, ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಅಧ್ಯಕ್ಷ ಎಲ್ಯಣ್ಣ ಗೌಡ ಕಟ್ಟ, ಸದಾಸಿದ್ಧಿ ಮಿತ್ರ ಬಳಗದ ಅಧ್ಯಕ್ಷ ಚೇತನ್ ಬೇಂಗನಡ್ಕ, ಸಂಪ್ಯಾಡಿ ಕಿ.ಪ್ರಾ ಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ನಡುಮನೆ ಉಪಸ್ಥಿತರಿದ್ದರು.
ಸಾರ್ವಜನಿಕ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಸದಾಶಿವ ಕಾರ್ಜ ಪ್ರಥಮ, ಆದರ್ಶ ಹೊಸ್ಮಠ ದ್ವಿತೀಯ, ಎನ್.ಎಂ.ಕೆ. ಗುರಿಯಡ್ಕ ತೃತೀಯ, ಶಕ್ತಿ ಎಂಟರ್ ಪ್ರೈಸಸ್ ಚತುರ್ಥ ಬಹುಮಾನವನ್ನು ಪಡಕೊಂಡವು. ಉಳಿದಂತೆ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.