ನಿಡ್ಮಾರು ವಿಶ್ವಕರ್ಮ ಭಜನಾ ಮಂಡಳಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ, ಶಿಕ್ಷಕರಿಗೆ ಸನ್ಮಾನ

0

ನಿಡ್ಮಾರು ವಿಶ್ವಕರ್ಮ ಭಜನಾ ಮಂಡಳಿ ಆಶ್ರಯದಲ್ಲಿ 9ನೇ ವರ್ಷದ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರಿಗೆ ಸನ್ಮಾನ – ಗುರುವಂದನಾ ಕಾರ್ಯಕ್ರಮ ಸೆ. 5ರಂದು ಸಂಘದ ಅಧ್ಯಕ್ಷ ಮಧುಚಂದ್ರ ಪಂಜ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ನಿವೃತ್ತ ಶಿಕ್ಷಕಿ ಪುತ್ತೂರು ತಾಲೂಕಿನ ಸಿದ್ಯಾಲ ವಿಜಯಲಕ್ಷ್ಮಿಯವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಗೌರವ ಸಲಹೆಗಾರರಾದ ಜಯರಾಜ ಆಚಾರ್ ಕಳತ್ತಜೆ, ಪ್ರಮೋದ್ ಶೆಟ್ಟಿ ನಿಡ್ಮಾರು, ಸುಭಾಶ್ಚಂದ್ರ ರೈ ತೋಟ, ಆರ್.ಕೆ ಭಾಸ್ಕರ್, ಶಶಿಕಲಾ ಭಾಸ್ಕರ್, ಪ್ರಧಾನ ಕಾರ್ಯದರ್ಶಿ ನಾರಾಯಣ ಎಂ.ಆರ್, ಉಪಾಧ್ಯಕ್ಷ ದಿನೇಶ್ ಬಾಚೋಡಿ, ಕಾರ್ಯದರ್ಶಿ ಪ್ರವೀಣ್ ಕಾಣಿಯೂರು, ಕೋಶಾಧಿಕಾರಿ ಶೇಷಪ್ಪ ಆಚಾರ್ಯ ನಿಡ್ಮಾರು, ಸದಸ್ಯರಾದ ರಮೇಶ್ ಕೊಳೆಂಜಿಕೋಡಿ, ಗೋವರ್ಧನ ಕಲ್ಲಗದ್ದೆ, ಹರಿನಾರಾಯಣ ಕಳಂಜ, ಅರುಣಾಕ್ಷಿ ನಿಡ್ಮಾರು, ಸತ್ಯ ಅಲೆಕ್ಕಾಡಿ, ನವೀನ್, ರಾಮಚಂದ್ರ, ಮೋಹಿನಿ, ಮಧುಚಂದ್ರ ನಿಡ್ಮಾರು, ಮತ್ತಿತರರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಮಧುಚಂದ್ರ ಪಂಜ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ನಾರಾಯಣ ಎಂ.ಆರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾವ್ಯ ಕಳಂಜ ಪ್ರಾರ್ಥಿಸಿದರು.