ಸುಳ್ಯ ಅನ್ಸಾರಿಯಾ ಎಜುಕೇಷನ್ ಸೆಂಟರ್ ವತಿಯಿಂದ ಮಿಲಾದ್ ಘೋಷಣಾ ರ್‍ಯಾಲಿ

0

ರ್‍ಯಾಲಿಯಲ್ಲಿ ಆಕರ್ಷಣೆ ಮೆರೆದ ವಿದ್ಯಾರ್ಥಿಗಳ ದಫ್ ಪ್ರದರ್ಶನ ಮತ್ತು ಸ್ಕೌಟ್

ಸುಳ್ಯ ಅನ್ಸಾರಿಯಾ ಎಜುಕೇಶನ್ ಸೆಂಟರ್ ವತಿಯಿಂದ ಅನ್ಸಾರಿಯಾ ಹಿಫ್ಲ್ ಮತ್ತು ದಹ್ವಾ ದರ್ಸ್ ವಿದ್ಯಾರ್ಥಿಗಳಿಂದ ಆಕರ್ಷಕ ಮಿಲಾದ್ ಘೋಷಣಾ ರ್ಯಾಲಿ ಸೆ 6 ರಂದು ಸುಳ್ಯದಲ್ಲಿ ನಡೆಯಿತು.

ಜಟ್ಟಿಪಳ್ಳ ಅನ್ಸಾರಿಯ ಎಜುಕೇಶನ್ ಸೆಂಟರ್ ವಠಾರದಿಂದ ಸೈಯ್ಯಿದ್ ತಾಹಿರ್ ತಂಙಳ್ ಸುಳ್ಯ ದುವಾ ನೆರವೇರಿಸಿ ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್ ರ್ಯಾಲಿಗೆ ಚಾಲನೆ ನೀಡಿದರು.

ಬಳಿಕ ವಿದ್ಯಾರ್ಥಿಗಳ ದಫ್ ಪ್ರದರ್ಶನ ಮತ್ತು ಸ್ಕೌಟ್ ತಂಡದೊಂದಿಗೆ ಆಕರ್ಷಕ ಮೀಲಾದ್ ರ್ಯಾಲಿ ಘೋಷಣೆ ಮತ್ತು ಮಧ್ಹ್ ಗೀತೆಗಳ ಮೂಲಕ ಸುಳ್ಯದ ನಗರ ಮುಖ್ಯ ಬೀದಿಯಲ್ಲಿ ಸಾಗಿ ಗಾಂಧಿನಗರ ಪೆಟ್ರೋಲ್ ಬಂಕ್ ಬಳಿ ಸಮಾಪನ ಗೊಂಡಿತು.

ಸಮಾರೋಪದಲ್ಲಿ ಪೈಗಂಬರ್ ಮುಹಮ್ಮದ್ ಸ ಅ ರವರ ತತ್ವ ಆದರ್ಶದ ಬಗ್ಗೆ ಮಾತನಾಡಿದ ಅನ್ಸಾ ರಿಯಾ ಎಜುಕೇಶನಲ್ ಸೆಂಟರ್ ಇದರ ಪ್ರಾಧ್ಯಾಪಕರಾದ ಅಡ್ವಕೇಟ್ ಅಬ್ದುಲ್ಲಾ ಹಿಮಮಿ ಸಖಾಫಿ ಮೀಲಾದ್ ಸಂದೇಶವನ್ನು ನುಡಿದರು.

ಈ ಸಂಧರ್ಭದಲ್ಲಿ ಸಂಸ್ಥೆಯ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ ಉಪಾಧ್ಯಕ್ಷರು ಗಳಾದ ಎಸ್ ಪಿ ಅಬೂಬಕ್ಕರ್,ಹಾಜಿ ಅಬ್ದುಲ್ ಖಾದರ್ ಪಟೇಲ್,ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ,ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ,ಖತೀಬರಾದ ಹಾಫಿಲ್ ಹಾಮಿದ್ ಹಿಮಮಿ, ಕಬೀರ್ ಹಿಮಮಿ, ಮುದರ್ರಿಸ್ ಅಬೂಬಕ್ಕರ್ ಸಖಾಫಿ ನಿರ್ದೇಶಕರುಗಳಾದ ಅಬ್ದುಲ್ ಹಮೀದ್ ಜನತಾ, ಉಮ್ಮರ್ ಕೋಲ್ಚಾರ್, ಅಡ್ವಕೇಟ್ ಅಬೂಬಕ್ಕರ್ ಅಡ್ಕಾರ್,ಸಿದ್ದೀಕ್ ಕಟ್ಟೆಕ್ಕಾರ್ಸ್,ಮುಸ್ತಫಾ ಹಾಜಿ ಸಾಗರ್,ಸಂಸ್ಥೆಯ ಮೆನೇಜರ್ ಉವೈಸ್,ಕೆ ಎಂ ಜೆ ಸುಳ್ಯ ಝೋನ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜ ಕೊಚ್ಚಿ,ಉದ್ಯಮಿಗಳಾದ ಶಾಹುಲ್ ಹಮೀದ್ ಕುತ್ತಮಟ್ಟೆ,ಫೈಝಲ್ ಕಟ್ಟೆಕ್ಕಾರ್ಸ್,ಕೆ ಬಿ ಇಬ್ರಾಹಿಂ, ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಕೆ ಎಸ್ ಉಮ್ಮರ್, ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೋ,ಮದರಸ ಅಧ್ಯಾಪಕರುಗಳಾದ ಸಯ್ಯಿದ್ ಹುಸೈನ್ ಸಅದಿ ತಂಗಳ್,ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ನಿಝರ್ ಸಖಾಫಿ,ಸಿರಾಜುದ್ದಿನ್ ಸಖಾಫಿ,ನೌಶಾದ್ ಮದನಿ, ಅಂಝತುಲ್, ಕೆ ಎ ಕಲಾಂ ಬೀಜಕೊಚ್ಚಿ, ಖರಾರ್ ಮುಈನಿ ಮೊದಲಾದವರು ಉಪಸ್ಥಿತರಿದ್ದರು.