ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಕಮಲಾಕ್ಷಿ ವಿ. ಶೆಟ್ಟಿಯವರಿಗೆ ಸುಳ್ಯ ತಾಲೂಕು ಗ್ಯಾರೇಜು ಮಾಲಕ ಸಂಘದ ವತಿಯಿಂದ ಸನ್ಮಾನ

0

ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಕಮಲಾಕ್ಷಿ ವಿ ಶೆಟ್ಟಿಯವರನ್ನು ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೆ 7 ರಂದು ಸುಳ್ಯ ಶಿಕ್ಷಕರ ನಿವಾಸದಲ್ಲಿ ಗುರುವಂದನಾ ಸನ್ಮಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಪಾಡಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಂಘದ ಪೋಷಕರಾದ ಬಾಲಕೃಷ್ಣ ಭಟ್ ಕೊಡಂಕೇರಿ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ್ ರೈ,ಉದ್ಯಮಿ ಅಶೋಕ್ ಪ್ರಭು,ಪಶು ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು, ಗಣ್ಯರುಗಳಾದ ಡಾ ಸಾಯಿ ಗೀತಾ, ಡಾ.ರಂಗಯ್ಯ ಮೊದಲಾದವರು ಉಪಸ್ಥಿತರಿದ್ದರು.

ಡಾ ಸಾಯಿಗೀತಾ ಪ್ರಾರ್ಥನೆ ಮಾಡಿ,ಕಾರ್ಯದರ್ಶಿ ಮದುಚಂದ್ರ ಪಂಜ ಸ್ವಾಗತಿಸಿ ವಾಸುದೇವ ಜಾಲ್ಸೂರು ವಂದಿಸಿದರು.

ಸಂಘದ ಪದಾಧಿಕಾರಿಗಳಾದ ಗೋಪಾಲ್ ನಡುಬೈಲು, ಜನಾರ್ಧನ ದೋಳ,ನಾಗೇಶ್ ಕೇರ್ಪಳ ಅನಿಸಿಕೆ ವ್ಯಕ್ತ ಪಡಿಸಿ ಶುಭಾರೈಸಿದರು.

ಕಾರ್ಯಕ್ರಮದಲ್ಲಿ
ಕೋಶಾಧಿಕಾರಿ ದಿನೇಶ್ ಬಾಚೋಡಿ,ಉಪಾಧ್ಯಕ್ಷರು ಗಳಾದ ಧನಂಜಯ ಗುತ್ತಿಗಾರು,ಕಮಲಾಕ್ಷ ಕಲ್ಲುಗುಂಡಿ,ಮನೋಹರ ಬೊಳ್ಳುರು,ರಮೇಶ್ ಶೆಟ್ಟಿ ಭಗವತಿ, ಶಿಕ್ಷಕಿ ಶ್ರೀಮತಿ ಸವಿತಾ ಮೊದಲಾದವರು ಭಾಗವಹಿಸಿದ್ದರು.