ಕಳಂಜ: ನಿವೃತ್ತ ಅಧ್ಯಾಪಕ ವಿದ್ವಾನ್ ಗೋಪಾಲಕೃಷ್ಣ ಭಟ್ ರ ನುಡಿಮುತ್ತುಗಳ ಸಂಗ್ರಹ ಶತಕತ್ರಯಾಧಿಕ ಬಿಡುಗಡೆ

0

ನಿವೃತ್ತ ಶಿಕ್ಷಕ ವಿದ್ವಾನ್ ಪಿ. ಗೋಪಾಲಕೃಷ್ಣ ಭಟ್ಟರ ಗಾದೆಗಳು, ನುಡಿಮುತ್ತುಗಳ ಸಂಗ್ರಹ ಶತಕತ್ರಯಾಧಿಕ ಬಿಡುಗಡೆ ಕಾರ್ಯಕ್ರಮ ಸೆ. 5ರಂದು ಕಳಂಜ ಗ್ರಾಮದ ಮುಂಡುಗಾರು ಸುಬ್ರಹ್ಮಣ್ಯರ ಮನೆಯಲ್ಲಿ ನಡೆಯಿತು.

ಎನ್.ಎಸ್. ಮೋಹನ್ ರಾವ್ ಪುಸ್ತಕ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಗಿಳಿಕ್ಕಿಂಜ ಜಯರಾಮ ಭಾಗವಹಿಸಿದ್ದರು. ಶ್ರೀಮತಿ ಅಣ್ಲಡ್ಕ ಪರಮೇಶ್ವರಿ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಶುಭಗೌರಿ ಮತ್ತು ಸಾವಿತ್ರಿ ಜಯರಾಮ ಪ್ರಾರ್ಥಿಸಿದರು. ಈಶ್ವರಚಂದ್ರ ಮುಂಡುಗಾರು ವಂದಿಸಿದರು. ಸುಬ್ರಹ್ಮಣ್ಯ ಮುಂಡುಗಾರು ಕಾರ್ಯಕ್ರಮ ನಿರೂಪಿಸಿದರು.