ಸಂಪಾಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಂಜೂರಾತಿ ಪತ್ರ ವಿತರಣೆ

0
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪಾಜೆ ವಲಯ ಅಡ್ಯಡ್ಕ ಕಾರ್ಯಕ್ಷೇತ್ರದ ಶ್ರೀ ನಾಗಬ್ರಹ್ಮ ಸಂಘದ ಸದಸ್ಯ  ವಸಂತ ಬಾಜಿ ನಡ್ಕ ಅವರ  ಅಂಗಡಿಗೆ ಗಾಳಿ ಮಳೆಗೆ ಮರ ಬಿದ್ದು ಅಪಾರ ಹಾನಿಯಾಗಿದ್ದರಿಂದ ಪ್ರಾಕೃತಿಕ ವಿಕೋಪದಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.  ಟ್ರಸ್ಟ್  ವತಿಯಿಂದ ಡಾ.  ಡಿ.  ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ 15000ದ ಮಂಜುರಾತಿ ಪತ್ರವನ್ನು ಸಂಪಾಜೆ ವಲಯ ಜನಜಾಗೃತಿ ಸದಸ್ಯರಾದ ಸತೀಶ್ ರಾವ್ ದಾಸರ ಬೈಲ್ ರವರು ವಸಂತ ಬಾಜಿನಡ್ಕ  ಅವರಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಅಡ್ಯಡ್ಕ ಒಕ್ಕೂಟದ ಉಪಾಧ್ಯಕ್ಷೆ ಹೇಮಾವತಿ ಅಡ್ಕಬಳೆ ವಲಯ ಮೇಲ್ವಿಚಾರಕ ಗಂಗಾಧರ್ ಸಂಘದ ಸದಸ್ಯರುಗಳು, ಅಡ್ಯಡ್ಕ ಸೇವಾ ಪ್ರತಿನಿಧಿ ಕಲ್ಪನಾ ತೊಡಿಕಾನ ಪ್ರತಿನಿಧಿ ಸುಂದರ ಬಾಜಿನಡ್ಕ ಉಪಸ್ಥಿತರಿದ್ದರು.