ಸತ್ಯಭಾಮ ಹಾಗೂ ಜಯರಾಮ ನವಜೋಡಿಯಿಂದ ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ನೀರಿನ ಟ್ಯಾಂಕ್ ಕೊಡುಗೆ

0

ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಸೊಕ್ಕಲಿಂಗಂ ಕುಕ್ಕನ್ನೂರು ಮತ್ತು ಶ್ರೀಮತಿ ರಾಮಾಯಿ ದಂಪತಿಗಳ ದ್ವಿತೀಯ ಪುತ್ರಿ ಸತ್ಯಭಾಮರವರ ವಿವಾಹವು ಶ್ರೀ ಮಹಾವಿಷ್ಣು ದೇವಾಲಯ ಬೆಲ್ಲೂರು ಇಲ್ಲಿ ಸೆ.೧೨ ರಂದು ನಡೆದಿದ್ದು, ಅತಿಥಿ ಸತ್ಕಾರವು ಸೆ.೧೩ರಂದು ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರ ಇಲ್ಲಿ ನಡೆಯಿತು.

ಈ ಪ್ರಯುಕ್ತ ತಮ್ಮ ವಿವಾಹ ದಿನದ ನೆನಪಿಗಾಗಿ ಭಜನಾ ಮಂದಿರಕ್ಕೆ ೧ ಸಾವಿರ ಲೀಟರ್‌ನ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭ ಭಜನಾ ಮಂದಿರದ ಅಧ್ಯಕ್ಷ ಗಿರಿಧರಗೌಡ ನಾಯರಹಿತ್ಲು, ಲೋಕೇಶ ಸುತ್ತುಕೋಟೆ, ಲೀಲಾವತಿ ನಡುಮನೆ, ಮೋಹಿನಿ ನಡುಮನೆ, ಹರಿಣಾಕ್ಷಿ ನಡುಮನೆ, ನಿರಂಜನ ಮಿತ್ತಮಜಲು ಉಪಸ್ಥಿತರಿದ್ದರು.