ಅಡ್ಯಡ್ಕ ಅಂಗನವಾಡಿಗೆ ಟಿ. ವಿ. ಕೊಡುಗೆ

0

ದಕ್ಷಿಣ ಕನ್ನಡ ತಮಿಳು ಸೇವಾ ಸಂಘ ಸುಳ್ಯ ಸಮಿತಿಯ ವತಿಯಿಂದ ತೊಡಿಕಾನ ಗ್ರಾಮದ ಅಡ್ಯಡ್ಕ ಅಂಗನವಾಡಿ ಕೇಂದ್ರಕ್ಕೆ ಸ್ಮಾರ್ಟ್ ಕ್ಲಾಸ್ ಗಾಗಿ ಎಂಟು ಸಾವಿರ ಮೌಲ್ಯದ ಟಿವಿಯನ್ನು ಕೊಡುಗೆಯಾಗಿ ನೀಡಲಾಯಿತು.

ಸಂಘದ ಪದಾಧಿಕಾರಿಗಳು ಟಿ ವಿ ಯನ್ನು ಅಂಗನವಾಡಿ ಶಿಕ್ಷಕಿ ನಳಾಯಿನಿ ಅಡ್ಯಡ್ಕ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶರತ್ ನಾಗಪಟ್ಟಣ, ಸ್ಥಾಪಕ ಅಧ್ಯಕ್ಷ ಪೆರುಮಾಳ್, ಕಾರ್ಯದರ್ಶಿ ಕಾರ್ತಿಕ್ ಕೂಟೇಲು, ಕೋಶಾಧಿಕಾರಿ ಗಣೇಶ್ ಜಟ್ಟಿಪಳ, ಸದಸ್ಯರಾದ ಪುಷ್ಪರಾಜ್ ನಾಗ ಪಟ್ಟಣ, ಸತೀಶ್ ನೆಲ್ಲಿಕುಮೇರಿ, ಆನಂದ ಕುಕ್ಕಂದೂರು, ಶ್ರೀ ದೇವಿ ಪ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಮಣಿರಾಜ್ ಹಾಗೂ ಸದಸ್ಯರು, ಅಂಗನವಾಡಿ ಮಕ್ಕಳ ಪೋಷಕರು ಉಪಸ್ಥಿತರಿದ್ದರು.