ಸುಬ್ರಹ್ಮಣ್ಯ: ಬಿದ್ದು ಸಿಕ್ಕಿದ ಚಿನ್ನದ ಬ್ರೇಸ್‌ಲೆಟ್, ಠಾಣೆಯಲ್ಲಿ ಹಸ್ತಾಂತರ

0

ಸುಬ್ರಹ್ಮಣ್ಯದಲ್ಲಿ ಬಿದ್ದು ಸಿಕ್ಕಿದ್ದ ಚಿನ್ನದ ಬ್ರೇಸ್‌ಲೆಟ್ ನ್ನು ಅದರ ವಾರಸುದಾರರಿಗೆ ಠಾಣೆಯಲ್ಲಿ ಸೆ.೧೬ ರಂದು ಹಸ್ತಾಂತರಿಸಲಾಯಿತು.

ಸುಬ್ರಹ್ಮಣ್ಯ ಗಣೇಶೋತ್ಸವ ಶೋಭಾಯಾತ್ರೆಯು ಸೆ.೧೩ ರಂದು ನಡೆದಿದ್ದು ಆ ಸಂದರ್ಭದಲ್ಲಿ ಸುಮಾರು ೬ ಗ್ರಾಂ ಚಿನ್ನದ ಬ್ರಾಸ್ ಲೈಟ್ ಗಣೇಶೋತ್ಸವ ಸಮಿತಿಯವರಿಗೆ ಬಿದ್ದು ಸಿಕ್ಕಿದ್ದು ಅದನ್ನು ಅವರು ಸುಬ್ರಹ್ಮಣ್ಯ ಪೊಲೀಸರಿಗೆ ಹಸ್ತಾಂತರಿಸಿದ್ದರು, ಠಾಣಾಧಿಕಾರಿಗಳು ವಾರಸುದಾರರಾದ ಭಾಸ್ಕರವರನ್ನು ಪತ್ತೆ ಹಚ್ಚಿ ಗಣೇಶೋತ್ಸವ ಸಮಿತಿ ಮುಖಂಡರಿಂದ ವಾರಸುದಾರರಿಗೆ ಚಿನ್ನ ಮರಳಿಸಿರುತ್ತಾರೆ. ಸಮತಿಯವರ ಪ್ರಾಮಾಣಿಕತೆಗೆ ಎಸ್ ಐ ಕಾರ್ತಿಕ್ ರವರು ಹರ್ಷ ವ್ಯಕ್ತ ಪಡಿಸಿದ್ದಾರೆ.