ಬೆಟ್ಟಂಪಾಡಿ ಕೊರಗಜ್ಜ ದೈವಸ್ಥಾನದಲ್ಲಿ ನ.ಪಂ.ಉಪಾಧ್ಯಕ್ಷ ಬುದ್ಧ ನಾಯ್ಕ ರಿಗೆ ಸನ್ಮಾನ

0

ಬೆಟ್ಟಂಪಾಡಿ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿದ್ದ ಬುದ್ಧ ನಾಯ್ಕ್ ರವರು ಸುಳ್ಯ ನಗರ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸೆ.16 ರಂದು ಕೊರಗಜ್ಜ ದೈವಸ್ಥಾನ ವಠಾರದಲ್ಲಿ ಸಂಕ್ರಮಣ ಆಚರಣೆಯಂದು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪುರೋಹಿತ್ ನಾಗರಾಜ ಭಟ್, ಶ್ರೀನಿವಾಸ್ ಮಾಸ್ತರ್ ಛತ್ರಪತಿ ನಗರ, ರವೀಶ್ ಪಡ್ಡಂಬೈಲ್, ಮಲ್ಲೇಶ್ ಬೆಟ್ಟಂಪಾಡಿ, ಕೊರಗಜ್ಜ ಸಮಿತಿಯ ಅಧ್ಯಕ್ಷರಾದ ಚಿದಾನಂದ ವಿದ್ಯಾನಗರ, ಚಂದ್ರರಾವ್, ಅನೂಪ್ ಪೈ, ಜಗದೀಶ್, ವಿಶ್ವನಾಥ್ ಪಡ್ಡಂಬೈಲ್, ಚಂದ್ರಶೇಖರ ಶಾಂತಿನಗರ, ಜನಾರ್ಧನ, ಆನಂದ ಬೆಟ್ಟಂಪಾಡಿ, ಸುನಿಲ್ ಕುಮಾರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.