ಡಾ.ಬಾಲಕೃಷ್ಣ ಮುಂಡೊಡಿ ಕುಟುಂಬದಿಂದ ಸಾಂದೀಪ್ ಶಾಲೆಗೆ ದೇಣಿಗೆ

0

ಮುಂಡೊಡಿಯ ದಿ| ಧರ್ಮಪಾಲರವರ ಇಬ್ಬರು ಮಕ್ಕಳಾದ ನಾಗೇಂದ್ರ ಹಾಗೂ ಸನತ್ ಎಂಬವರು ಇತ್ತೀಚಿಗೆ ನಿಧನರಾಗಿದ್ದು ಅವರ ಸ್ಮರಣಾರ್ಥ ದಿ|ಧರ್ಮಪಾಲರವರ ಹಿರಿಯ ಸಹೋದರ ಅಮೆರಿಕದಲ್ಲಿ ವಾಸ್ತವ್ಯ ಹೊಂದಿರುವ ಡಾ|ಬಾಲಕೃಷ್ಣ ಮುಂಡೋಡಿ ಹಾಗೂ ಅವರ ಪತ್ನಿ ಡಾ| ವಿಜಯಲಕ್ಷ್ಮಿ ಕಾರ್ಲೆ ಹಾಗೂ ಪುತ್ರಿ ಶರೀನಾ ಮುಂಡೋಡಿ ಯವರು ಸುಳ್ಯದ ವಿಕಲಚೇತನರ ವಿಶೇಷ ಮಕ್ಕಳ ಶಾಲೆ ಸಂದೀಪ್ ವಿಶೇಷ ಶಾಲೆಗೆ ಒಂದು ಲಕ್ಷ ರೂಪಾಯಿಗಯನ್ನು ದೇಣಿಗೆಯಾಗಿನೀಡಿರುತ್ತಾರೆ.

ಈ ಮೊತ್ತವನ್ನು ಮೃತರ ಹೆಸರಿನಲ್ಲಿ ಅವರ ಸ್ಮರಣಾರ್ಥ ಮಕ್ಕಳ ಭೋಜನಕ್ಕೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು ಎಂದು ಶಾಲಾ ಪ್ರಾಂಶುಪಾಲೆ ಹರಿಣಿ ಸದಾಶಿವ ತಿಳಿಸಿದ್ದಾರೆ.

ಅಂತ್ಯಕ್ರಿಯೆ ಸಮಾರಾಧನೆ ಮುಂತಾದ ಸಂದರ್ಭಗಳಲ್ಲಿ ಆಗುವ ವೆಚ್ಚವನ್ನು ಸಮಾಜಮುಖಿ ಕೆಲಸಗಳಿಗೆ ನೀಡುವ ಮಾನವೀಯ ನೆಲೆಗಟ್ಟಿನ ಚಿಂತನೆ ದೂರದಷ್ಟಿಯಿಂದ ಕೂಡಿದ್ದು ಅದಕ್ಕಾಗಿ ದಂಪತಿಗಳನ್ನು ಅಭಿನಂದಿಸಬೇಕಾಗಿದೆ ಎಂದು ಎಂ ಬಿ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಎಂ ಬಿ ಸದಾಶಿವ ತಿಳಿಸಿದ್ದಾರೆ.