ಸಂವಿಧಾನ ಬದ್ದ ಸಮಾನ ಮನಸ್ಕರ ಬಳಗದ ವತಿಯಿಂದ ಸುಳ್ಯ ತಹಶೀಲ್ದಾರರಿಗೆ ಬೀಳ್ಕೊಡುಗೆ

0

ಸುಳ್ಯ ತಹಶಿಲ್ದಾರರಾಗಿ ಸೇವೆಸಲ್ಲಿಸಿದ ಜಿ.ಮಂಜುನಾಥ್ ರವರು ಇದೀಗ ವರ್ಗಾವಣೆಗೊಂಡು ಕನಕಪುರ ತಹಶಿಲ್ದಾರರಾಗಿ ನೇಮಕರಾದ ಹಿನ್ನೆಲೆಯಲ್ಲಿ ಸುಳ್ಯ ಸಂವಿಧಾನಬದ್ದ ಸಮಾನ ಮನಸ್ಕ ಸಂಘಟನೆಯ ವತಿಯಿಂದ ಬಿಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ತಹಶಿಲ್ದಾರರನ್ನು ಅಭಿನಂದಿಸಿ ಗೌರವಿಸಲಾಯಿತು.
ಸಂಘಟನೆಯ ಸಂಯೋಜಕರುಗಳಾದ ಭರತ್ ಕುಕ್ಕುಜಡ್ಕ, ಎ.ಕೆ.ಇಬ್ರಾಹಿಂ, ವಸಂತ ಪೆಲ್ತಡ್ಕ , ಹಾಗೂ ಗೌರವ ಸದಸ್ಯರುಗಳಾದ , ಮಹಮ್ಮದ್ ಕುಂಞಿ ಗೂನಡ್ಕ, ಗೀತಾ ಕೋಲ್ಚಾರ್,
ಉಮ್ಮರ್ ಕೆ ಎಸ್, ಶರೀಫ್ ಕಂಠಿ,ಮಂಜುನಾಥ್ ಮಡ್ತಿಲ, ಮಹೇಶ್ ಬೆಳ್ಳಾರ್ಕರ್ ,ಕೇಶವ ಪಾಟಾಳಿ , ಶವಾದ್ ಗೂನಡ್ಕ ಅಬೂಸಾಲಿ, ಕೆ.ಪಿ ಜಾನಿ, ಗೂನಡ್ಕ ಇವರುಗಳು ತಹಶಿಲ್ದಾರರನ್ನು ಅಬಿನಂದಿಸಿ ಶುಭ ಹಾರೈಸಿದರು.