ಐವರ್ನಾಡು : ಶ್ರೀ ಶಾರದಾ ಪೂಜಾ ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಯುವಶಕ್ತಿ ಸಂಘ ಐವರ್ನಾಡು, ಸಾರ್ವಜನಿಕರ ಸಹಕಾರದೊಂದಿಗೆ ಶ್ರೀ ಶಾರದಾ ಪೂಜಾ ಮಹೋತ್ಸವವು ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.05 ಮತ್ತು ಅ.06 ರಂದು ಐವರ್ನಾಡು ಸ.ಹಿ.ಪ್ರಾ.ಶಾಲೆಯ ಮಡ್ತಿಲ ಪುರುಷೋತ್ತಮ ಗೌಡ ಸ್ಮಾರಕ ರಂಗಮಂದಿರದಲ್ಲಿ ನಡೆಯಲಿದ್ದು ಆಮಂತ್ರಣ ಪತ್ರ ಬಿಡುಗಡೆಯು ಸೆ.21 ರಂದು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಯುವಶಕ್ತಿ ಸಂಘದ ಗೌರವಾಧ್ಯಕ್ಷ ದಿನೇಶ್ ಮಡ್ತಿಲ, ಅಧ್ಯಕ್ಷ ನವೀನ ಬಾಂಜಿಕೋಡಿ,ಪ್ರ.ಕಾರ್ಯದರ್ಶಿ ವಿನಯ ಉದ್ದಂಪಾಡಿ, ಕರುಣಾಕರ ಮಡ್ತಿಲ,ಮುರಳೀಧರ ಕೊಚ್ಚಿ, ಅಶ್ವತ್ ಜಬಳೆ,ರಮೇಶ ಮಿತ್ತಮೂಲೆ, ಚೇತನ ಮಿತ್ತಮೂಲೆ,ಪ್ರವೀಣ ಉದ್ದಂಪಾಡಿ,ಹೊನ್ನಪ್ಪ ಉದ್ದಂಪಾಡಿ ಹಾಗೂ ಮತ್ತಿತರರು
ಉಪಸ್ಥಿತರಿದ್ದರು.