ಅ.5ರಂದು ಅರಣ್ಯ ಇಲಾಖೆಯಿಂದ ಸುಳ್ಯದಲ್ಲಿ ವನ್ಯಜೀವಿ ಸಪ್ತಾಹ ಪ್ರಯುಕ್ತ

0

ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ – ‘ವನ್ಯ ಚಿತ್ತಾರ’

ಕರ್ನಾಟಕ ಅರಣ್ಯ ಇಲಾಖೆ ಕರ್ನಾಟಕ ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘ ಮಂಗಳೂರು ವಿಭಾಗ, ದ.ಕ. ಜಿಲ್ಲೆ ಇದರ ವತಿಯಿಂದ

ವನ್ಯಜೀವಿ ಸಪ್ತಾಹ- 2024ರ ಪ್ರಯುಕ್ತ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ- ವನ್ಯ ಚಿತ್ತಾರ-2024 ಅ. 05 ರಂದು ಪೂರ್ವಾಹ್ನ 10.00ಕ್ಕೆ ಸುಳ್ಯ ಸರಕಾರಿ ಮಾದರಿ ಶಾಲೆಯಲ್ಲಿ ನಡೆಯಲಿದೆ.

ಸ್ಪರ್ಧಾ ವಿಭಾಗ

1 ರಿಂದ 4 ನೇ ತರಗತಿ (ಕ್ರೆಯಾನ್ಸ್ ಅಥವಾ ಆಯಿಲ್ ಪೇಸ್ಟಲ್)
5 ರಿಂದ 7 ನೇ ತರಗತಿ (ವಾಟರ್ ಕಲರ್), 8 ರಿಂದ 10 ನೇ ತರಗತಿಯ ಮಕ್ಕಳಿಗೆ (ವಾಟರ್ ಕಲರ್) ಎಲ್ಲರಿಗೂ ಪರಿಸರ ಮತ್ತು ವನ್ಯಜೀವಿ‌ ವಿಷಯದಲ್ಲಿ ಸ್ಪರ್ಧೆ ನಡೆಯುತ್ತದೆ.

ವಿಶೇಷ ಸೂಚನೆ:

  • ಜಿಲ್ಲೆಯ ಯಾವುದೇ ಶಾಲೆಯ ಆಸಕ್ತ ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶವಿದೆ.
  • ವಿದ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಚೀಟಿಯನ್ನು ತರತಕ್ಕದ್ದು.
  • ಪ್ರತೀ ವಿಭಾಗದಲ್ಲಿ ಅತ್ಯುತ್ತಮ 03 ಕಲಾಕೃತಿಗಳಿಗೆ ಪ್ರಶಸ್ತಿ ನೀಡಲಾಗುವುದು
  • ಡ್ರಾಯಿಂಗ್ ಹಾಳೆ ಒದಗಿಸಲಾಗುವುದು.
  • ಚಿತ್ರ ಬಿಡಿಸುವ ಪರಿಕರಗಳನ್ನು ವಿದ್ಯಾರ್ಥಿಗಳೇ ತರತಕ್ಕದ್ದು + ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಗುವುದು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಜಯಕುಮಾರ್9480418806

ವೆಂಕಟೇಶ್

9743677161

ಪ್ರಸನ್ನ ಐವರ್ನಾಡು

9449331609

ರನ್ನು ಸಂಪರ್ಕಿಸಬಹುದಾಗಿದೆ.