ಬಾಲಚಂದ್ರ ಯು.ಕೆ ಊರುಬೈಲು ರವರ ಶ್ರದ್ಧಾಂಜಲಿ ಕಾರ್ಯಕ್ರಮ

0

ಚೆಂಬು ಗ್ರಾಮದ ಊರುಬೈಲು ಬಾಲಚಂದ್ರ ಯು.ಕೆ. ರವರು ಸೆ.21 ರಂದು ನಿಧನರಾಗಿದ್ದು ಮೃತರ ಉತ್ತರ ಕ್ರಿಯಾಧಿ ಸದ್ಗತಿ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಅ. 2 ರಂದು ಊರುಬೈಲು
ಮನೆಯಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಮೃತರ ಸಹೋದರ ಯು.ಕೆ.ಪುರುಷೋತ್ತಮ, ಸಹೋದರಿ ಯು.ಕೆ.ಭವಾನಿ, ಪತ್ನಿ ಯು.ಬಿ.ಗಿರಿಜಾ, ಪುತ್ರ ಲೋಕೇಶ್ ಊರುಬೈಲು, ಪುತ್ರಿಯರಾದ ಮೋಕ್ಷಿತಾ ಗೌರವ್ ಪಟೇಲ್, ಶರ್ಮಿಳಾ ಕಾರ್ತಿಕ್ ಕೊಂಬಾರನ ಹಾಗೂ ಕುಟುಂಬದ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.