ಎಣ್ಮೂರು ಪ್ರೌಢಶಾಲಾ ಮಹಾದ್ವಾರದ ಗುದ್ದಲಿ ಪೂಜೆ

0


ಸರ್ಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿ ಅ.೩ರಂದು ಶಾಲಾ ಮಹಾದ್ವಾರ ನಿರ್ಮಾಣದ ಗುದ್ದಲಿ ಪೂಜೆ ನಡೆಯಿತು. ಕಾಮದೇನು ಗ್ರೂಫ್ ಮಾಲಕ ಮಾಧವ ಗೌಡ ಬೆಳ್ಳಾರೆ ಗುದ್ದಲಿಪೂಜೆ ನೆರವೇರಿಸಿದರು.
ನಿರ್ಮಾಣ ಸಮಿತಿಯ ಅಧ್ಯಕ್ಷ ವೆಂಕಪ್ಪ ಗೌಡ ಆಲಾಜೆ ದೀಪ ಪ್ರಜ್ವಲನಗೊಳಿಸಿದರು. ಸಮಿತಿಯ ಕಾರ್ಯದರ್ಶಿ ಜನಾರ್ಧನ ಅಲೆಕ್ಕಾಡಿ, ಸಂಚಾಲಕರಾದ ಕರುಣಾಕರ ಗೌಡ ಹುದೇರಿ, ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ನಡ್ಕ, ಸಾನಿಧ್ಯ ಕಾಂಪ್ಲೆಕ್ಸ್ ನ ಮಾಲಕ ತಿಮ್ಮಪ್ಪಗೌಡ ಮಲ್ಲಾರ , ಧರ್ಮಶ್ರೀ ಆರ್ಕೇಡ್ ನ ಮಾಲಕ ದೀಕ್ಷೀತ್ ಗೌಡ ಮುರುಳ್ಯ _ಎಣ್ಮೂರು ಪ್ರಾ,ಕೃ,ಪ,ಸ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ ಎನ್, ಯತೀಂದ್ರನಾಥ ರೈ ಸಮ್ಯಕ್ ಎಂಟರ್ ಪ್ರೈಸಸ್‌ನ ನಿತಿನ್ ರಾಜ್ ಶೆಟ್ಟಿ ಅಕ್ಷಯ್ ಟ್ರೇಡರ್ಸನ ನವೀನ್ ಕುಮಾರ್, ಹಿರಿಯ ವಿದ್ಯಾರ್ಥಿ ಸಂಘದ ಅದ್ಯಕ್ಷ ರಾದ ಸಚಿನ್ ಪಟ್ಟೆ, ಶ್ರೀಮತಿ ವನಿತಾ ಸುವರ್ಣ, ಎಸ್‌ಡಿಎಂಂಸಿ ಅಧ್ಯಕ್ಷ ಮೇದಪ್ಪ ಗೌಡ ಅಲೆಂಗಾರ ಹಾಗೂ ಸದಸ್ಯರು,ಪೋಷಕರು,ಶಿಕ್ಷಕ ವೃಂದ, ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದರು. ಮುಖ್ಯಶಿಕ್ಷಕ ಟೈಟಸ್ ವರ್ಗೀಸ್ ಸ್ವಾಗತಿಸಿ, ವಂದಿಸಿದರು. ಚಿತ್ರಕಲಾ ಶಿಕ್ಷಕ ಮೋಹನ ಗೌಡ ಎನಾಜೆ ಕಾರ್ಯಕ್ರಮ ಸಂಘಟಿಸಿದ್ದರು.