ಸುಳ್ಯ ಪೊಲೀಸ್ ವೃತ್ತ ನಿರೀಕ್ಷರ ಕಚೇರಿಯಲ್ಲಿ ಗಣಪತಿ ಹವನ ಹಾಗೂ ಆಯುಧ ಪೂಜೆ

0

ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಆಯುಧ ಪೂಜೆಯು ಅ.11ರಂದು ನಡೆಯಿತು.

ಪುರೋಹಿತ ಜಯರಾಮ್ ಸುಳ್ಯ ರವರ ನೇತೃತ್ವದಲ್ಲಿ ಗಣಪತಿ ಹವನವಾಗಿ ದುರ್ಗಾದೇವಿಯ ಪೂಜೆ ಹಾಗೂ ಆಯುಧ ಪೂಜೆ ಹಾಗೂ ವಾಹನಗಳ ಪೂಜೆ ನೆರವೇರಿತು.

ಈ ಸಂದರ್ಭದಲ್ಲಿ ಸುಳ್ಯ ವೃತ್ತ ನಿರೀಕ್ಷಿಕರಾದ ತಿಮ್ಮಪ್ಪ ನಾಯ್ಕ್ ಮತ್ತು ಕುಟುಂಬ ಸದಸ್ಯರು,ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಸಂತೋಷ್,ಬೆಳ್ಳಾರೆ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಉಪಸ್ಥಿತರಿದ್ದರು.

ಕಚೇರಿಯ ಸಿಬ್ಬಂದಿಗಳು, ಪತ್ರಕರ್ತರು,ಹಾಗೂ ಸ್ಥಳೀಯರು ಭಾಗವಹಿಸಿದ್ದರು.