ಎನ್.ಕೆ “ಲಾ” ಅಸೋಸಿಯೇಟ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಸುಳ್ಯ ಪೊಲೀಸ್ ಠಾಣೆಯ ಮುಂಭಾಗದ ಶಕುಂತಲಾ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ವಕೀಲ ನಾರಾಯಣ ಕೆ. ರವರ ಕಚೇರಿ ಕುರುಂಜಿಭಾಗ್ ನ ಡಿ.ಎಂ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಗೆ ಸ್ಥಳಾಂತರಗೊಂಡಿದ್ದು, ವಿಜಯದಶಮಿಯ ಶುಭ ದಿನವಾದ ಅ.12ರಂದು ಬೆಳಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯರಂಭಗೊಂಡಿತು.

ಅರ್ಚಕ ಶಿವರಾಮ ಕೇಪುಣ್ಣಯರ ನೇತೃತ್ವದಲ್ಲಿ ಗಣಹೋಮ ನಡೆಯಿತು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಸುಕುಮಾರ ಕೋಡ್ತುಗುಳಿ, ಶ್ರೀಮತಿ ಲಕ್ಷ್ಮಿ ನಾರಾಯಣ ಕೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಎನ್.ಕೆ. “ಲಾ” ಅಸೋಸಿಯೇಟ್ಸ್ ನ
ಹಿರಿಯ ವಕೀಲರಾದ ನಾರಾಯಣ ಕೆ, ಚಂದ್ರಶೇಖರ ಬಿ., ಅನಿತಾ ಆರ್ ನಾಯಕ್, ವಿಪುಲ್ ನೀಪಾ‌೯ಡಿ, ಸತೀಶ್ಚಂದ್ರ ಡಿ. ಎಚ್ ಎಲ್ಲರನ್ನೂ ಸ್ವಾಗತಿಸಿದರು.