ಕಾಯರ್ತೋಡಿ: ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ

0

ಶ್ರೀ ದುರ್ಗಾಪರಮೇಶ್ವರಿಗೆ ವಿಜಯದಶಮಿ ಮಹಾಪೂಜೆ

ಸುಳ್ಯ ನಗರದ ಕಾಯರ್ತೋಡಿ ವಿಷ್ಣುಸರ್ಕಲ್ ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 21ನೇ ವರ್ಷದ ನವರಾತ್ರಿ – ವಿಜಯ ದಶಮಿ ಕಾರ್ಯಕ್ರಮವು ಅ.12ರಂದು ನಡೆಯಿತು. ಈ ಸಂದರ್ಭದಲ್ಲಿ ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿಜಯದಶಮಿ ಮಹಾಪೂಜೆ ನಡೆಯಿತು.

ಅ.9ರಂದು ಬೆಳಿಗ್ಗೆ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ, ವಿದ್ಯಾರಂಭ ಹಾಗೂ ಅ.10ರಂದು ಮಹಾಗುರು ಕಾಲಭೈರವೇಶ್ವರ ಸ್ವಾಮಿಗೆ ಅಭಿಷೇಕ ಮತ್ತು ವಿಶೇಷ ಪೂಜೆ ನಡೆಯಿತು

ಅ.11ರಂದು ವಾಹನಪೂಜೆ ನಡೆದು ಅ.12ರಂದು ಶ್ರೀದೇವಿಗೆ ವಿಜಯದಶಮಿ ಮಹಾಪೂಜೆ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ
ಆಡಳಿತ ಮೊಕ್ತೇಸರ ಡಿ.ಎಸ್. ಗಿರೀಶ್, ಅಧ್ಯಕ್ಷ ವೆಂಕಟ್ರಮಣ ಡಿ.ಎನ್., ಸಂಚಾಲಕ ಸುರೇಶ್ ಕುದ್ಕುಳಿ, ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.