ಬೆಳ್ಳಾರೆ ಗ್ರಾಮದ ಪಡ್ಪು ಹಾಗೂ ಪರ್ತಿಕೆರೆ ಬಳಿ ಮಳೆಯಿಂದಾಗಿ ಖಾಸಗಿಯವರ ರಸ್ತೆಯಿಂದ ಸಾರ್ವಜನಿಕ ರಸ್ತೆಗೆ ಮಣ್ಣು ಬಂದು ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾದ ಘಟನೆ ವರದಿಯಾಗಿದೆ.
ಪಡ್ಪು ಹಾಗೂ ಪರ್ತಿಕೆರೆ ಎಂಬಲ್ಲಿ ಬೆಳ್ಳಾರೆ ಕಿಲಂಗೋಡಿ ಶೇಣಿ ಸಂಪರ್ಕಿಸುವ ರಸ್ತೆಗೆ ಮಳೆ ನೀರಿನಿಂದ ಮಣ್ಣು ಶೇಖರಣೆ ಆಗಿದೆ. ಸಂಬಂಧಿಸಿದವರು ಮಣ್ಣು ತೆರವು ಮಾಡಬೇಕಾಗಿ ಕೇಳಿ ಕೊಳ್ಳ ಲಾಗಿದೆ.


