ಐವರ್ನಾಡು ಸಹಕಾರಿ ಸಂಘದಿಂದ ಚೈತನ್ಯ ವಿಮೆ ಚೆಕ್ ವಿತರಣೆ

0

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಲೇಖಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಭೋಜಪ್ಪ ಗೌಡ ರವರು ಇತ್ತೀಚೆಗೆ ಅಕಾಲಿಕವಾಗಿ ನಿಧನರಾಗಿದ್ದು ಅವರು ನವೋದಯ ಸಂಘದ ಸದಸ್ಯರಾಗಿದ್ದರು.
ಇವರು ಚೈತನ್ಯ ವಿಮೆ ಪಾಲಿಸಿದ್ದು ಇವರ ಕುಟುಂಬಕ್ಕೆ ಚೈತನ್ಯ ವಿಮೆಯ ರೂ.1,00,000 ಮೊತ್ತವನ್ನು ಇವರ ಮನೆಯವರಿಗೆ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ವಿತರಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕ ಗೋಪಾಲಕೃಷ್ಣ ಸಿ.ಎಚ್, ಹಿರಿಯರಾದ ಮಾಧವ ಭಟ್ ಶೃಂಗೇರಿ,ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೀನಪ್ಪ ಗೌಡ ನಿಡ್ಡಾಜೆ, ಜ್ಯೋತ್ಸ್ನಾ ಪಾಲೆಪ್ಪಾಡಿ, ವಾಸುದೇವ ನಿಡುಬೆ ಉಪಸ್ಥಿತರಿದ್ದರು.
ನವೋದಯ ಪ್ರೇರಕ ಪ್ರಕಾಶ್ ಜಬಳೆ ಸ್ವಾಗತಿಸಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ.ಎಚ್. ವಂದಿಸಿದರು.