ಪಾಲಡ್ಕ: ನೆರೆಪೀಡಿತ ಮನೆಯವರಿಗೆ ಮಾಜಿ ಸಚಿವ ರಮಾನಾಥ ರೈ ಅವರಿಂದ ಕಿಟ್ ವಿತರಣೆ

0

 

ಸುಳ್ಯದ ಅರಂಬೂರಿನ ಪಾಲಡ್ಕದಲ್ಲಿ ನೆರೆಹಾನಿಗೊಳಗಾದ

ಸುಮಾರು ಹದಿನೈದು ಮನೆಯವರಿಗೆ ಕೆ.ಪಿ.ಸಿ.ಸಿ. ಸಂಯೋಜಕ ನಂದಕುಮಾರ್ ಅವರು ನೀಡಿದ ಆಹಾರಧಾನ್ಯಗಳ ಕಿಟ್ಟನ್ನು ಮಾಜಿ ಸಚಿವ ರಮಾನಾಥ ರೈ ಅವರು ಆ.11ರಂದು ವಿತರಿಸಿದರು.

ಕಲ್ಲುಗುಂಡಿ ನೆರೆಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಿಂತಿರುಗುವ ವೇಳೆ ಅರಂಬೂರಿನ ಪಾಲಡ್ಕದಲ್ಲಿ ನೆರೆಹಾನಿ ಪೀಡಿತ ಮನೆ ನಿವಾಸಿಗಳಿಗೆ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಉಸ್ತುವಾರಿ ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಕಾಂಗ್ರೆಸ್ ಮುಖಂಡರುಗಳಾದ ಭರತ್ ಮುಂಡೋಡಿ, ಪಿ.ಎಸ್. ಗಂಗಾಧರ, ಸಂಶುದ್ಧೀನ್ ಸುಳ್ಯ, ಕೆ‌.ಎಂ. ಮುಸ್ತಫಾ, ಆಲೆಟ್ಟಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ  ಯೂಸಫ್ ಅಂಜಿಕಾರ್,  ಶಾಫಿ ಕುತ್ತಮೊಟ್ಟೆ, ಯೂಸುಫ್ ಅಂಜಿಕಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.