ಬೆಳ್ಳಾರೆಯಲ್ಲಿ ಗುರುವಂದನಾ ಕಾರ್ಯಕ್ರಮ

0

ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ
ಅಂಗವಾಗಿ ಗುರುವಂದನಾ ಕಾರ್ಯಕ್ರಮ ನಿವೃತ್ತ ಶಿಕ್ಷಕ ಎಸ್.ಎಂ. ಗೋಪಾಲಕೃಷ್ಣ ಮಂಡೇಪು ಇವರ ಮನೆಯಲ್ಲಿ ನಡೆಯಿತು.
ನಿವೃತ್ತ ಶಿಕ್ಷಕರಾದ ಎಸ್. ಎಂ ಗೋಪಾಲಕೃಷ್ಣ ಮಂಡೇಪು ಇವರನ್ನು ಗುರುವಂದನಾ ಪತ್ರದೊಂದಿಗೆ
ಸನ್ಮಾನಿಸಿ ಗೌರವಾರ್ಪಣೆಯನ್ನು ಸಮರ್ಪಿಸಲಾಯಿತು. ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಸಂಜಯ್ ನೆಟ್ಟಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಾರೆ ಗ್ರಾ.
ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ ಗುರುವಂದನಾ ಕಾರ್ಯಕ್ರಮದ ಬಗ್ಗೆ ಶುಭ ಹಾರೈಸಿ ಮಾತಾಡಿದರು. ಶ್ರೀನಿವಾಸ ಕುರುಂಬುಡೇಲು ಸ್ವಾಗತಿಸಿ
ಸ್ನೇಹಿತರ ಕಲಾ ಸಂಘದ ಕಾರ್ಯದರ್ಶಿ ವಸಂತ ಉಲ್ಲಾಸ್ ವಂದಿಸಿದರು. ಸ್ನೇಹಿತರ ಕಲಾ ಸಂಘದ ನಿಕಟಪೂರ್ವಾಧ್ಯಕ್ಷರಾದ ಕೊರಗಪ್ಪ ಕುರುಂಬುಡೇಲು
ಕಾರ್ಯಕ್ರಮ ನಿರೂಪಿಸಿದರು.