ಯುವಸ್ಪೂರ್ತಿ ಸಂಘ ಪುತ್ಯ ಪೆರಾಜೆ (ಕರಂಟಡ್ಕ) ಇದರ ವತಿಯಿಂದ 19ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆ.18 ರಂದು ಸ.ಕಿ.ಪ್ರಾ.ಶಾಲೆ ಪುತ್ಯ ಪೆರಾಜೆ ಶಾಲಾ ವಠಾರದಲ್ಲಿ ನಡೆಯಿತು. ಕಾರ್ಯಕ್ರವನ್ನು ಪರಮೇಶ್ವರ ಪೆರಂಗಜೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕ ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಹಾಗೂ ಜಾರುಕಂಬ ಸ್ಪರ್ಧೆ ನಡೆಸಲಾಯಿತು. ಜಾರುಕಂಬ ಸ್ಪರ್ಧೆ ಯನ್ನು ಅಕ್ಷೀತ್ ನಾಯ್ಕ ನಿಡ್ಯಮಲೆ ಗೆದ್ದರು.
ಪುರುಷರ ಹಗ್ಗಜಗ್ಗಟ ಪ್ರಥಮ ಚಿಗುರು ಯುವಕ ಮಂಡಲ ಕುಂಬಳಚೇರಿ ಹಾಗೂ ದ್ವಿತೀಯ ಸ್ಥಾನವನ್ನು ಮಿತ್ರ ಬಳಗ ಕಾಯರ್ತೋಡಿ ಪಡೆಯಿತು. ಮಹಿಳೆಯರ ಹಗ್ಗಾಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ನಾಗರ್ಶೀ ಫ್ರೆಂಡ್ಸ್ ಹಾಗೂ ದ್ವಿತೀಯ ಸ್ಥಾನವನ್ನು ಶೀ ವಿಷ್ಣು ನಿಡ್ಯಮಲೆ ಪಡೆಯಿತು. ಸಭಾ ಕಾರ್ಯಕ್ರಮ ನಡೆಸಲಾಗಿದ್ದು ಸಭೆಯ ಅಧ್ಯಕ್ಷತೆಯನ್ನು ಯುವ ಸ್ಪೂರ್ತಿ ಸಂಘದ ಅಧ್ಯಕ್ಷ ಪುನೀತ್ ನಿಡ್ಯಮಲೆ ವಹಿಸಿದ್ದರು. ದಾರ್ಮಿಕ ಉಪನ್ಯಾಸವನ್ನು ಜಯಪ್ರಕಾಶ್ ಗಂಡಿಮನೆ ಮಾಡಿದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಪದ್ಮಯ್ಯ ಮಾಸ್ತರ್ ಅಡ್ಕದ ಮನೆ, ಪರಮೇಶ್ವರ ಪೆರಂಗಾಜೆ ಉಪಸ್ಥಿತರಿದ್ದರು. ಸಭೆಯಲ್ಲಿ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು.