ಕರ್ಲಪ್ಪಾಡಿ ಕ್ಷೇತ್ರದಲ್ಲಿ ಸೋಣ ಶನಿವಾರದ ಬಲಿವಾಡು ಸೇವೆ ಆರಂಭ

0

 

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದಲ್ಲಿ ಸೋಣ ಶನಿವಾರದ ಪ್ರಯುಕ್ತ ಬಲಿವಾಡು ಸೇವೆ ಆ.20 ರಂದು ಆರಂಭಗೊಂಡಿದೆ.

ಆ.20 ರಂದು ಬೆಳಗ್ಗೆ ಹಾಗೂ ಮಧ್ಯಾಹ್ನ ವಿಶೇಷ ಪೂಜೆಗಳು ನಡೆಯಿತು. ನೂರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.

ಆ.28, ಸೆ.3, ಸೆ.10 ಹಾಗೂ ಸೆ.17 ರಂದು ಸೋಣ ಶನಿವಾರ ಬಲಿವಾಡು ಸೇವೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಪ್ರಸಾದ ಸ್ವೀಕರಿಸುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮೇನಾಲ ತಿಳಿಸಿದ್ದಾರೆ.