ಸುಳ್ಯ ರಾಮ ಮಂದಿರದಲ್ಲಿ ಒಂದು ತಿಂಗಳ ಸಂಧ್ಯಾ ಕಾಲದ ಭಜನಾ ಕಾರ್ಯಕ್ರಮ- ಆಮಂತ್ರಣ ಪತ್ರಿಕೆ ಬಿಡುಗಡೆ

0

 

 

ಸುಳ್ಯ ಶ್ರೀ ರಾಂ ಪೇಟೆಯ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯಲಿರುವ ಒಂದು ತಿಂಗಳ ಸಂಧ್ಯಾ ಕಾಲದ ಭಜನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಸೆ.22 ರಂದು ಮಂದಿರದಲ್ಲಿ ಜರುಗಿತು.

 


ಬ್ರಹ್ಮಶ್ರೀವೇದಮೂರ್ತಿ ಪುರೋಹಿತ ನಾಗರಾಜ್ ಭಟ್ ರವರು ಪ್ರಾರ್ಥಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಮಂದಿರದ ಧರ್ಮದರ್ಶಿ ಮಂಡಳಿಯ ಸದಸ್ಯ ಎಂ.ಬಿ.ಸದಾಶಿವ ರವರು ಪ್ರಸ್ತಾವಿಕವಾಗಿ ಮಾತನಾಡಿದರು.
ಮಂದಿರದ 80 ನೇ ವರ್ಷದ ಏಕಹಾ ಭಜನೆಯ ಪ್ರಯುಕ್ತ ಅ.5 ರಿಂದ ನ.3 ರ ತನಕ ನಿರಂತರವಾಗಿ ಸಂಜೆ ಗಂಟೆ 7.00 ರಿಂದ 8.30 ರ ತನಕ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆಯು ನಡೆಯಲಿದೆ.
ಈ ಸಂದರ್ಭದಲ್ಲಿ ಸದಸ್ಯರಾದ ಅಶೋಕ ಪ್ರಭು ಸುಳ್ಯ, ಮಹಾಬಲ ಕೇರ್ಪಳ, ಶ್ರೀನಿವಾಸ ರಾವ್ ಸುಳ್ಯ, ಭಾಸ್ಕರ ನಾಯರ್ ಅರಂಬೂರು,ಗೋಪಾಲ ನಡುಬೈಲು, ಸುಮಿತ್ರ ಇಂಜಿನಿಯರ್, ಅನಿಲ್ ಕೇರ್ಪಳ, ಆನಂದ ಬೆಟ್ಟಂಪಾಡಿ, ರಘು ಸುಳ್ಯ, ಗಣೇಶ್ ಸುಳ್ಯ, ಪುರುಷೋತ್ತಮ, ಅರ್ಚಕ ವೃಂದದವರು ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.