![](https://sullia.suddinews.com/wp-content/uploads/2023/01/ad9a8041-d4d3-44d0-9114-d364e3361de8-771x1024.jpg)
ಹರಿಹರ ಪಲ್ಲತಡ್ಕ ಗ್ರಾ.ಪಂ ವತಿಯಿಂದ ನಡುಗಲ್ಲು ಕೊಲ್ಲಮೊಗ್ರು ರಸ್ತೆ ಅಭಿವೃದ್ಧಿ ಮತ್ತು ನಿರ್ವಹಣೆ ಮಾಡುವಂತೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ ಉಪವಿಭಾಗ ಪುತ್ತೂರು ಇಲ್ಲಿಗೆ ಪತ್ರ ಬರೆದ ಬಳಿಕ ಕೆಲಸ ಆರಂಭವಾಗಿರುವುದಾಗಿ ವರದಿಯಾಗಿದೆ. ಹರಿಹರ ಪಲ್ಲತಡ್ಕ ಗ್ರಾ.ಪಂ ವತಿಯಿಂದ ಜ . ೯ ರಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ ಉಪವಿಭಾಗ ಪುತ್ತೂರು ಇಲ್ಲಿಗೆ ಪತ್ರ ಬರೆದು ನಡುಗಲ್ಲು – ಕೊಲ್ಲಮೊಗ್ರು ೯.೭೦ ಕಿ.ಮೀ ರಸ್ತೆಯ ಪ್ರಧಾನಮಂತ್ರಿ ಗ್ರಾಮ ಯೋಜನೆಯಿಂದ ಡಾಮರೀಕರಣ ಮಾಡಿದ್ದು ಇದು ಈಗ ಹೊಂಡ ಗುಂಡಿಯಿಂದ ಕೂಡಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಸಂಚಾರ ಯೋಗ್ಯ ರಸ್ತೆಯನ್ನಾಗಿಸಬೇಕಾಗಿ ಮನವಿಯಲ್ಲಿ ಬರೆಯಲಾಗಿತ್ತು. ಇದನ್ನು ಮನಗಂಡ ಇಲಾಖಾಧಿಕಾರಿಗಳ ಸೂಚನೆಯಂತೆ ಗುತ್ತಿಗೆದಾರರು ಈ ರಸ್ತೆಯ ಹೊಂಡ ಗುಂಡಿಯನ್ನು ಮುಚ್ಚಿ ಡಾಮರೀಕರಣ ಕೆಲಸವನ್ನು ವಾರದಿಂದೀಚೆ ಕೈಗೆತ್ತಿಕೊಂಡಿರುವುದಾಗಿ ತಿಳಿದು ಬಂದಿದೆ.