ಕುಕ್ಕೆಶ್ರೀ ಸರ್ಕಲ್ ಯುವಕರ ಬಳಗ ದಿಂದ ಸುಬ್ರಹ್ಮಣ್ಯ ದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24×7 ಸೇವೆ ಒದಗಿಸುವಂತೆ ಮುಖ್ಯ ಮಂತ್ರಿ, ಆರೋಗ್ಯ ಮಂತ್ರಿ, ಸಚಿವ ಅಂಗಾರ, ಜಿಲ್ಲಾಧಿಕಾರಿ ಆದಿಯಾಗಿ ಮನವಿ ಸಮರ್ಪಿಸಲಾಯಿತು. ಈ ಮನವಿಗೆ ನೂರಾರು ಮಂದಿಯ ಸಹಿ ಹಾಕಲಾಗಿದೆ.
ಇದಲ್ಲದೆ ಸುಬ್ರಹ್ಮಣ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ಎರಡು ಬೆಡ್ ಗಳಿದ್ದು ತುರ್ತಾಗಿ ಹೆಚ್ಚುವರಿ ಬೆಡ್ ಒದಗಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಲಾಗಿದ್ದು ಕುಕ್ಕೆ ಶ್ರೀ ಸರ್ಕಲ್ ಫ್ರೆಂಡ್ಸ್ ನ ಕೇಳಿಕೆ ಮೇರೆಗೆ ಎರಡು ಬೆಡ್ ಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒದಗಿಸಿರುವುದಾಗಿ ತಿಳಿದು ಬಂದಿದೆ.