ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಜ್ಯೋತಿಷಿ ವಾಸುದೇವ ಗೌಡ ಮೃತ್ಯು

0

ನಡುಗಲ್ಲಿನ ಅಂಜೇರಿ ಎಂಬಲ್ಲಿ ಮೊನ್ನೆ ಬೈಕ್ ಸ್ಕಿಡ್ ಆಗಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿರುವ ವಾಸುದೇವ ಗೌಡ ಎಂಬವರು ಇಂದು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ನಾಲ್ಕೂರು ಗ್ರಾಮದ ವಾಸುದೇವ ಗೌಡ ಚಾರ್ಮತ ಎಂಬವರು ಗುತ್ತಿಗಾರಿಗೆ ಬಂದು ನಡುಗಲ್ಲಿಗೆ ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದು ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗಳಾಗಿತ್ತು ಸುಳ್ಯದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಿದ್ದಲ್ಲಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರಿಗೆ ಉಸಿರಾಟ ಸರಿಯಾಗಿತ್ತು. ಪ್ರಜ್ಞೆ ಬಂದ ಮೇಲಷ್ಟೆ ತಲೆಯ ಶಸ್ತ್ರಚಿಕಿತ್ಸೆಗೆ ನಿರ್ಧರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಮೃತ ಪಟ್ಟಿದ್ದಾರೆ. ಅವರಿಗೆ ೪೪ ವರ್ಷ ವಯಸ್ಸಾಗಿತ್ತು. ವಾಸುದೇವರು ಜ್ಯೋತಿಷಿಯಾಗಿದ್ದರು.