ಜೂ. 19ರಿಂದ 25: ಕಲ್ಲಪಳ್ಳಿಯಲ್ಲಿ ಎನ್.ಎಂ.ಸಿ.ಯ ಎನ್.ಎಸ್.ಎಸ್. ಶಿಬಿರ

0

ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಜೂ. 19ರಿಂದ ಜೂ. 25ರ ತನಕ ಕಲ್ಲಪಳ್ಳಿಯ ಆದರ್ಶ ಕ್ರೀಡಾ ಸಂಘದ ಸಹಭಾಗಿತ್ವದಲ್ಲಿ ಪೆರುಮುಂಡದಲ್ಲಿ ನಡೆಯಲಿದೆ.

ಜೂ. 19ರಂದು ಮಧ್ಯಾಹ್ನ 2.30ಕ್ಕೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ.ಎಂ ಅಧ್ಯಕ್ಷತೆ ವಹಿಸಲಿದ್ದಾರೆ. ಎ.ಒ.ಎಲ್.ಇ. ಕಾರ್ಯದರ್ಶಿ ಕೆ.ವಿ. ಹೇಮನಾಥ ಶಿಬಿರವನ್ನು ಉದ್ಘಾಟಿಸಲಿದ್ದಾರೆ.

ಪನತ್ತಡಿ ಗ್ರಾ.ಪಂ. ಸದಸ್ಯ ರಾಧಾಕೃಷ್ಣ ಎ, ಪ್ರಗತಿಪರ ಕೃಷಿಕ ಶ್ರೀಕಾಂತ್ ಗೋಳ್ವಕ್ಕರ್, ನ್ಯಾಯವಾದಿ ಎ.ಸಿ‌. ನಂದನ್, ಕಲ್ಲಪಳ್ಳಿ ಸ.ಹಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯರಾದ ವಿಠಲ್ ಅಡ್ವಾಳ್, ಜಯಪ್ರಕಾಶ್ ಪೆರುಮುಂಡ, ಬಾಲಚಂದ್ರ ಪಿ.ಎ, ಕ್ರೀಡಾ ಸಂಘದ ಅಧ್ಯಕ್ಷ ಸೃಜಿತ್ ಪೆರುಮುಂಡ, ಆದರ್ಶ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜುಳಾ ಗೋಪಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜೂ. 25ರಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಎಂ.ಬಿ.ಪೌಂಡೇಶನ್ ನ ಅಧ್ಯಕ್ಷ ಎಂ‌. ಬಿ. ಸದಾಶಿವ ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂಎಂ, ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸದಸ್ಯ ಅರುಣ್ ರಂಗತ್ತಮಲೆ, ಕಲ್ಲಪಳ್ಳಿ ಮಾತಾ ಅಮೃತಾನಂದಮಯಿ ಸೇವಾ ಸಂಘದ ಕನ್ವೀನರ್ ನಂದಕುಮಾರ್ ಬಾಟೋಳಿ, ಡಾ. ಕೇಶವ ಪಿ.ಕೆ, ಜಯಪ್ರಕಾಶ್ ಪೆರುಮುಂಡ, ಸೃಜಿತ್ ಪೆರುಮುಂಡ ಮತ್ತು ಮಂಜುಳಾ ಗೋಪಾಲ್ ಭಾಗವಹಿಸಲಿದ್ದಾರೆ.