ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚಯರ್ ಹಸ್ತಾಂತರ

0

ಬೆಳ್ಳಾರೆ ವಲಯದ, ದೇವರಕಾನ ಕಾರ್ಯಕ್ಷೇತ್ರದ, ದರ್ಕಾಸ್ತು ಎಂಬಲ್ಲಿ ವಾಸವಿರುವ ಲೋಕಯ್ಯರವರು, ಮಂಜುಶ್ರೀ ಸಂಘದ ಸದಸ್ಯರಾಗಿದ್ದು, ಇವರ ತಾಯಿಯವರಾದ ವೇದಾವತಿಯವರು ಎದ್ದು ನಡೆಯಲಾಗದ ಅಸಹಾಯಕ ಸ್ಥಿತಿಯಲ್ಲಿದ್ದು, ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾದ ವೀಲ್ ಚೇರನ್ನು ಜನ ಜಾಗೃತಿ ವೇದಿಕೆ ಸದಸ್ಯರಾದ ರಾಜೀವಿ ರೈ ರವರು ವಿತರಿಸಿದರು.


ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಗೋಪಾಲಕೃಷ್ಣ, ಸೇವಾಪ್ರತಿನಿಧಿ ಶ್ರೀಮತಿ ಯಶೋಧ, ಹಾಗೂ ಮನೆಯ ಸದಸ್ಯರು ಉಪಸ್ಥಿತರಿದ್ದರು.