ಓಡ್ಯಪ್ಪ ಗೌಡ ಚಾಕೋಟೆಯವರಿಗೆ ಶ್ರದ್ಧಾಂಜಲಿ, ವೈಕುಂಠ ಸಮಾರಾಧನೆ

0

ಐವರ್ನಾಡು ಗ್ರಾಮದ ಚಾಕೋಟೆ ಓಡ್ಯಪ್ಪ ಗೌಡರವರು ಜೂ.1 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆ ಜೂ.18 ರಂದು ಚಾಕೋಟೆ ಮನೆಯಲ್ಲಿ ನಡೆಯಿತು.


ಕಮಲಾಕ್ಷ ನಂಗಾರುರವರು ದಿ.ಓಡ್ಯಪ್ಪ ಗೌಡರ ಆದರ್ಶ ಗುಣಗಳ ಬಗ್ಗೆ ಮಾತನಾಡಿ ಗುಣಗಾನಗೈದರು.


ಈ ಸಂದರ್ಭದಲ್ಲಿ
ಮೃತರ ಪತ್ನಿ ಶ್ರೀಮತಿ ಶೇಷಮ್ಮ ಪುತ್ರ ಪ್ರಮೋದ್ ಚಾಕೋಟೆ, ಪುತ್ರಿಯರಾದ ಶ್ರೀಮತಿ ಶಶಿಕಲಾ ರಾಮಯ್ಯ ಖಂಡಿಗ ,ಶ್ರೀಮತಿ ಸವಿತಾ ಗಿರೀಶ್ ನಾರ್ಕೋಡು,ಶ್ರೀಮತಿ ಲತಾ ಗಣೇಶ್ ಗುಮ್ಮಟೆಗದ್ದೆ , ಶ್ರೀಮತಿ ರೀಣಾ ಸುಧೀರ್ ವಳಂಬ್ರ, ಸೊಸೆ, ಅಳಿಯಂದಿರು,ಮೊಮ್ಮಕ್ಕಳು ,ಕುಟುಂಬಸ್ಥರು ಉಪಸ್ಥಿತರಿದ್ದರು.


ಆಗಮಿಸಿದ ನೂರಾರು ಜನ ಗಣ್ಯರು ದಿ.ಓಡ್ಯಪ್ಪ ಗೌಡರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.