ಜೂ.25: ಪೆರಾಜೆ ಸಹಕಾರಿ ಸಂಘಕ್ಕೆ ಚುನಾವಣೆ

0

ಮೂವರಿಂದ ನಾಮಪತ್ರ ಹಿಂತೆಗೆತ 26 ಮಂದಿ ಅಂತಿಮ ಕಣದಲ್ಲಿ

ಕಾಂಗ್ರೆಸ್ – ಬಿ.ಜೆ.ಪಿ. ನೇರ ಹಣಾಹಣಿ

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ರಚನೆಗೆ ಜೂ.25ರಂದು ಚುನಾವಣೆ ನಡೆಯಲಿದ್ದು, 13 ಸ್ಥಾನಗಳಿಗೆ ಒಟ್ಟು 33 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಜೂ.19ರಂದು ಮೂರು ಮಂದಿ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದು, ಇದೀಗ ಅಂತಿಮ ಸ್ಪರ್ಧಾ ಕಣದಲ್ಲಿ 26 ಮಂದಿ ಇದ್ದಾರೆ.

ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ನಂಜಪ್ಪ ನಿಡ್ಯಮಲೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಜಗದೀಶ್ ಕೆ.ಜಿ. ಹಾಗೂ ಮಹಿಳಾ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿದ್ದ ಶ್ರೀಮತಿ ಎನ್.ಜೆ. ಅವರು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.

ಸಾಲಗಾರರ ಕ್ಷೇತ್ರದ ಪರಿಶಿಷ್ಠ ಜಾತಿ ಸ್ಥಾನಕ್ಕೆ ಬಿ.ಜೆ.ಪಿ. ಬೆಂಬಲಿತರಾದ ಜಯರಾಮ ಪಿ.ಟಿ. ಹಾಗೂ ಕಾಂಗ್ರೆಸ್ ಬೆಂಬಲಿತರಾದ ಹರೀಶ್ ಪಿ.ಪಿ. , ಪರಿಶಿಷ್ಠ ಪಂಗಡ ಸ್ಥಾನಕ್ಕೆ ಬಿ.ಜೆ.ಪಿ. ಬೆಂಬಲಿತರಾದ ಶೇಷಪ್ಪ ನಾಯ್ಕ ನಿಡ್ಯಮಲೆ ಹಾಗೂ ಕಾಂಗ್ರೆಸ್ ಬೆಂಬಲಿತರಾದ ಶ್ರೀಧರ ಕೆ.ಸಿ. ಕುಂಡಾಡು, ಮಹಿಳಾ ಸ್ಥಾನಕ್ಕೆ ಬಿ.ಜೆ.ಪಿ.ಯ ಪ್ರಮೀಳಾ ಬಂಗಾರಕೋಡಿ ಮತ್ತು ಪುಷ್ಪಾವತಿ ವ್ಯಾಪಾರೆ ಹಾಗೂ ಕಾಂಗ್ರೆಸ್ಸಿನ ರೋಹಿಣಿ ಎಂ‌.ಜೆ. (ಬಿಂದು) ಮತ್ತು ಶೀಲಾ ಎನ್.ಸಿ. , ಹಿಂದುಳಿದ ವರ್ಗ ಎ ಸ್ಥಾನಕ್ಕೆ ಬಿ.ಜೆ.ಪಿ.ಯ ಪ್ರದೀಪ್ ಕೆ.ಎಂ. ಹಾಗೂ ಕಾಂಗ್ರೆಸ್ ನ ಅಬೂಬಕ್ಕರ್ ಪಿ.ಎನ್., ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಬಿ.ಜೆ.ಪಿ.ಯ ದೀನರಾಜ್ ದೊಡ್ಡಡ್ಕ ಹಾಗೂ ಕಾಂಗ್ರೆಸ್ ನ ಹರಿಪ್ರಸಾದ್ ಪೆರಂಗಜೆ, ಜನರಲ್ ಸ್ಥಾನಕ್ಕೆ ಬಿ.ಜೆ.ಪಿ.ಯ ನಾಗೇಶ್ ಕುಂದಲ್ಪಾಡಿ, ಅಶೋಕ ಪೆರುಮುಂಡ, ಜಯರಾಮ ನಿಡ್ಯಮಲೆ ಬಿ., ಧನಂಜಯ ಕೋಡಿ, ಸೀತಾರಾಮ ಕದಿಕಡ್ಕ, ಹೊನ್ನಪ್ಪ ಅಮಚೂರು, ಕಾಂಗ್ರೆಸ್ಸಿನ ಸುರೇಶ ಪೆರುಮುಂಡ, ಉಮೇಶ ಕುಂಬಳಚೇರಿ, ಚಿದಾನಂದ ಪೀಚೆ, ಗೌತಮ್ ಮೂಲೆಮಜಲು, ಜನಾರ್ದನ ನಾಯ್ಕ್ ನಿಡ್ಯಮಲೆ, ದಯಾನಂದ ಪೆರುಮುಂಡ ( ಶ್ರೀಜಯ) ಅಂತಿಮ ಕಣದಲ್ಲಿದ್ದಾರೆ.


ಸಾಲರಹಿತ ಕ್ಷೇತ್ರದಿಂದ ಓರ್ವ ನಿರ್ದೇಶಕರ ಆಯ್ಕೆಯಾಗಬೇಕಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಿರಣ್ ಬಿ.ಎಲ್. ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನೇಮಿರಾಜ ಪಿ‌.ಎಚ್. ಪಾರೆ ಅವರು ಅಂತಿಮ ಕಣದಲ್ಲಿದ್ದಾರೆ.