ಸುಳ್ಯ- ಕೊಡಿಯಾಲಬೈಲ್ – ದುಗ್ಗಲಡ್ಕ ರಸ್ತೆಯ ಕೊಡಿಯಾಲಬೈಲ್ ಬಳಿ ಕಾಂಕ್ರೀಟೀಕರಣ ಆರಂಭ

0

ವಾಹನ ಸವಾರರು ಬದಲಿ ರಸ್ತೆ ಬಳಸುವಂತೆ ಸೂಚನೆ

ಸುಳ್ಯ – ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆಯ ಕೊಡಿಯಾಲಬೈಲ್ ವಿಷ್ಣುಮೂರ್ತಿ ದೈವಸ್ಥಾನದ ಬಳಿಯಿಂದ ಜಯನಗರಕ್ಕೆ ಹೋಗುವ ಜಂಕ್ಷನ್ ವರೆಗೆ ಕಾಂಕ್ರೀಟೀಕರಣ ನಾಳೆಯಿಂದ ಆರಂಭಗೊಂಡಿರುವುದಾಗಿ ತಿಳಿದುಬಂದಿದೆ.


ಈ‌ ರಸ್ತೆಯನ್ನು ಚುನಾವಣೆಗೂ ಮುನ್ನವೇ ಕಾಂಕ್ರೀಟೀಕರಣಕ್ಕಾಗಿ ಅಗೆದು ಹಾಕಲಾಗಿತ್ತು.ಕಾಮಗಾರಿಗಾಗಿ ರಸ್ತೆಯಲ್ಲಿ ಜಲ್ಲಿ, ಹೊಯಿಗೆ ಇತ್ಯಾದಿ ಸಾಮಗ್ರಿಗಳನ್ನು ತಂದು ಹಾಕಲಾಗಿದ್ದು,ಜಲ್ಲಿ ಹಾಕುವ ಕಾರ್ಯ ನಡೆಯುತ್ತಿದೆ.


ಈ ರಸ್ತೆಯಲ್ಲಿ ಸಾಗುವ ವಾಹನ ಸವಾರರು ಬದಲಿ ರಸ್ತೆಯ ಮೂಲಕ ಸಾಗಬೇಕಾಗಿದೆ.