ಯು.ಪಿ ಬಶೀರ್ ಬೆಳ್ಳಾರೆ ಟ್ರೆಂಡ್ ಕೇಂದ್ರೀಯ ಸಮಿತಿಗೆ ಆಯ್ಕೆ

0

ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ಶೈಕ್ಷಣಿಕ ಘಟಕವಾಗಿರುವ ಟ್ರೆಂಡ್ ಕೇಂದ್ರ ಸಮಿತಿಯ ಸದಸ್ಯರಾಗಿ ಯು.ಪಿ ಬಶೀರ್ ಬೆಳ್ಳಾರೆ ಆಯ್ಕೆಯಾಗಿದ್ದಾರೆ.

ಕೇಂದ್ರೀಯ ಟ್ರೆಂಡ್ ಸಮಿತಿಯ ಉಸ್ತುವಾರಿ ಸತ್ತಾರ್ ಪಂದಲ್ಲೂರು, ರಾಷ್ಟ್ರೀಯ ತರಬೇತುದಾರ ಡಾ.‌ಅಬ್ದುಲ್ ಖಯ್ಯೂಮ್ ಹಾಗೂ ಟಿಆರ್ ಬಿ ಉಸ್ತುವಾರಿ ಸಲಾಂ ಮಲಯಮ್ಮ ಅವರ ಮುಂದಾಳುತ್ವದಲ್ಲಿ ರಾಜ್ಯ ಟ್ರೆಂಡ್ ಸಮಿತಿ ಮುಖಂಡರ ಜೊತೆ ಸಭೆ ನಡೆಸಲಾಯಿತು. ಸಭೆಯಲ್ಲಿ ಯು.ಪಿ ಬಶೀರ್ ಬೆಳ್ಳಾರೆಯವರನ್ನು ಟ್ರೆಂಡ್ ಕೇಂದ್ರೀಯ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.


ಈ ಸಂದರ್ಭದಲ್ಲಿ ಎಸ್ಕೆಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ, ಟ್ರೆಂಡ್ ರಾಜ್ಯ ಚೇರ್ಮನ್ ಇಕ್ಬಾಲ್ ಬಾಳಿಲ, ಕನ್ವೀನರ್ ಜಂಸೀರ್ ವಾಫಿ, ನಾಯಕರಾದ ರಿಯಾಝ್ ರಹ್ಮಾನಿ, ತಾಜುದ್ದೀನ್ ರಹ್ಮಾನಿ, ರಾಜ್ಯ ಸಮಿತಿ ಸದಸ್ಯರಾದ ಯೂಸುಫ್ ಮುಂಡೋಲೆ ಅಬ್ದುಲ್ ಸಮದ್ ಮಾಸ್ಟರ್, ಸ್ವಾಧಿಕ್ ಬೆಂಗಳೂರು ಮೊದಲಾದವರು ಉಪಸ್ಥಿತರಿದ್ದರು.